
ಚೆನ್ನೈ(ತಮಿಳುನಾಡು) – `ಪೊಂಗಲ’ ಹಬ್ಬದ ನಿಮಿತ್ತದಿಂದ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಜನವರಿ 16 ರಂದು ಆಯೋಜಿಸಿದ್ದ `ಜಲ್ಲಿಕಟ್ಟು’ ಉತ್ಸವದಲ್ಲಿ 7 ಜನರು ಸಾವನ್ನಪ್ಪಿದ್ದೂ 400 ಜನರು ಗಾಯಗೊಂಡಿದ್ದಾರೆ. ಪುದುಕ್ಕೊಟ್ಟೈ ಮತ್ತು ಶಿವಗಂಗೈನಲ್ಲಿ 2 ಎತ್ತುಗಳು ಸಾವನ್ನಪ್ಪಿವೆ. ಪ್ರಾಣ ಕಳೆದುಕೊಂಡ ಜನರಲ್ಲಿ ಹೆಚ್ಚಿನವರು ಕ್ರೀಡೆಯಲ್ಲಿ ಭಾಗವಹಿಸಿರಲಿಲ್ಲ, ಬದಲಾಗಿ ಗೂಳಿ ಮಾಲೀಕರು ಮತ್ತು ವೀಕ್ಷಕರಾಗಿದ್ದರು. ಈ ಉತ್ಸವದಲ್ಲಿ ಜನದಟ್ಟಣೆಯಲ್ಲಿ ಎತ್ತುಗಳನ್ನು ಓಡಿಸಲಾಗುತ್ತದೆ. ಈ ಕ್ರೀಡೆಯಲ್ಲಿ ರಾಜ್ಯಾದ್ಯಂತ 600 ಕ್ಕೂ ಹೆಚ್ಚು ಎತ್ತುಗಳು ಭಾಗವಹಿಸಿದ್ದವು.
🐂💔 Jallikattu Tragedy in Tamil Nadu 💔🐂
📅 On January 16, during the ‘Jallikattu’ festival held as part of Pongal celebrations:
⚫ Atleast 7 people lost their lives
🔴 400 injured
🐂 2 bulls died in Pudukkottai and Sivaganga
VC: @NewIndianXpress pic.twitter.com/nHrrBq8PN9
— Sanatan Prabhat (@SanatanPrabhat) January 17, 2025
ಜಲ್ಲಿಕಟ್ಟು ಎಂದರೇನು ?

ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿಯ ದಿನದಂದು ‘ಪೊಂಗಲ್’ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಅವರು ಹೊಸ ವರ್ಷವನ್ನು ಪ್ರಾರಂಭಿಸುತ್ತಾರೆ. 3 ದಿನ ನಡೆಯುವ ಹಬ್ಬದ ಕೊನೆಯ ದಿನದಂದು ಎತ್ತುಗಳನ್ನು ಪೂಜಿಸಲಾಗುತ್ತದೆ. ಅವುಗಳನ್ನು ಅಲಂಕರಿಸಲಾಗುತ್ತದೆ. ನಂತರ ಜಲ್ಲಿಕಟ್ಟು ಆಟ ಪ್ರಾರಂಭವಾಗುತ್ತದೆ. ಈ ಆಟವು ಪೊಂಗಲ್ ಹಬ್ಬದ ಒಂದು ಭಾಗವಾಗಿದೆ. ಈ ಕ್ರೀಡೆಯಲ್ಲಿ, ಒಂದು ಗೂಳಿಯನ್ನು ಜನದಟ್ಟಣೆಯಲ್ಲಿ ಬಿಡಲಾಗುತ್ತದೆ. ಈ ಕ್ರೀಡೆಯಲ್ಲಿ ಭಾಗವಹಿಸುವ ಜನರು ಗೂಳಿಯ ಭುಜ ಹಿಡಿದು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಗೂಳಿಯ ಭುಜವನ್ನು ಹೆಚ್ಚು ಹೊತ್ತು ಹಿಡಿದಿರುವವನು ವಿಜೇತನಾಗುತ್ತಾನೆ. ಜಲ್ಲಿಕಟ್ಟುವಿನ ಇತಿಹಾಸ 2 ಸಾವಿರ 500 ವರ್ಷಗಳಷ್ಟು ಹಳೆಯದು. ಜಲ್ಲಿಕಟ್ಟು ಎಂಬ ಹೆಸರು ಎರಡು ಪದಗಳಿಂದ ಬಂದಿದೆ: ಜಲ್ಲಿ (ಬೆಳ್ಳಿ ಮತ್ತು ಚಿನ್ನದ ನಾಣ್ಯಗಳು) ಮತ್ತು ಕಟ್ಟು (ಕಟ್ಟಿದ). ಜಲ್ಲಿಕಟ್ಟಿನಲ್ಲಿ ಒಂದು ಗೂಳಿ ಸತ್ತರೆ, ಆಟಗಾರರು ತಲೆ ಬೋಳಿಸಿಕೊಳ್ಳುತ್ತಾರೆ ಮತ್ತು ಅದರ ಅಂತ್ಯಸಂಸ್ಕಾರ ಮಾಡುತ್ತಾರೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !