ಭಾಜಪದಿಂದ ಪಸ್ತಾಪ ಬಂದಿರುವುದಾಗಿ ದೆಹಲಿಯ ಉಪಮುಖ್ಯಮಂತ್ರಿ ಮನೀಷ ಸಿಸೊದಿಯಾ ಇವರ ಹೇಳಿಕೆ

ನವ ದೆಹಲಿ – ಆಮ್ ಆದ್ಮಿ ಪಕ್ಷ ಬಿಟ್ಟು ಭಾಜಪದಲ್ಲಿ ಸೇರಿಕೊಳ್ಳಿ, ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಯ ಎಲ್ಲಾ ಪ್ರಕರಣಗಳನ್ನು ಮುಚ್ಚಲಾಗುವುದು, ಎಂದು ನನಗೆ ಪ್ರಸ್ತಾಪ ನೀಡಲಾಗಿದೆ; ಆದರೆ ನಾನು ಮಹಾರಾಣಾ ಪ್ರತಾಪ ಇವರ ವಂಶಸ್ಥ, ನಾನು ರಾಜಪೂತ ಆಗಿದ್ದೇನೆ. ನಾನು ಭ್ರಷ್ಟರು ಮತ್ತು ಕುತಂತ್ರಿಗಳಿಗೆ ತಲೆಬಾಗುವುದಿಲ್ಲ. ನನ್ನ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳಾಗಿದೆ. ನಿಮಗೆ ಏನು ಮಾಡಬೇಕೋ ಅದನ್ನು ಮಾಡಿ, ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಇವರು ಟ್ವೀಟ್ ಮಾಡಿದ್ದಾರೆ.
मेरे पास भाजपा का संदेश आया है- “आप” तोड़कर भाजपा में आ जाओ, सारे CBI ED के केस बंद करवा देंगे
मेरा भाजपा को जवाब- मैं महाराणा प्रताप का वंशज हूँ, राजपूत हूँ। सर कटा लूँगा लेकिन भ्रष्टाचारियो-षड्यंत्रकारियोंके सामने झुकूँगा नहीं। मेरे ख़िलाफ़ सारे केस झूठे हैं।जो करना है कर लो
— Manish Sisodia (@msisodia) August 22, 2022
೨ ದಿನಗಳ ಹಿಂದೆ ಸಿಸೋದಿಯಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿ ಅವರ ವಿರುದ್ಧ ಅಬಕಾರಿ ಸುಂಕ ಪ್ರಕರಣ ದಾಖಲಿಸಿತ್ತು. ಸಿಸೋದಿಯಾ ಅವರ ಈ ಹೇಳಿಕೆಗೆ ಭಾಜಪದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಅವರು ಕರ್ಣಾವತಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಅದರಲ್ಲಿ ಸಿಸೋದಿಯಾ ಅವರು ಈ ಮೇಲಿನ ದಾವೆ ಮಾಡಿದ್ದಾರೆ.
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon