ರಾಮದೇವ ಬಾಬಾರವರು ಮದರಸಾದ ಮೇಲೆ ರಾಷ್ಟ್ರಧ್ವಜ ಹಾರಿಸಿದರು

ಹರಿದ್ವಾರ (ಉತ್ತರಾಖಂಡ) – ಯೋಗ ಋಷಿ ರಾಮದೇವ ಬಾಬಾರವರು ಭಾರತದ ಅಮೃತಮಹೋತ್ಸವದ ಸಂದರ್ಭದಲ್ಲಿ ೧೫ ಅಗಸ್ಟರಂದು ಇಲ್ಲಿಯ ಬೋದಹೇರಿ ಮೋಹಿಯುದ್ದೀನಪೂರ ಗ್ರಾಮದ ಒಂದು ಮದರಸಾದ ಮೇಲೆ ರಾಷ್ಟ್ರಧ್ವಜ ಹಾರಿಸಿದರು. ಈ ಸಂದರ್ಭದಲ್ಲಿ ಅವರು, ಮುಂದಿನ ೨೫ ವರ್ಷಗಳಲ್ಲಿ ನಾವು ‘ಸನಾತನ ಪರಂಪರೆ’ಯ ಮಾಧ್ಯಮದಿಂದ ಭಾರತವನ್ನು ‘ವಿಶ್ವಗುರು’ವನ್ನಾಗಿ ಮಾಡುವವರಿದ್ದೇವೆ. ಮದರಸಾ ಮೇಲೆ ರಾಷ್ಟ್ರಧ್ವಜ ಹಾರಿಸಿದ ಬಳಿಕ ಅವರು ರಾಷ್ಟ್ರೀಯ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವ ಇವುಗಳ ಸಂಗಮವಾಗಿದೆ ಎಂದು ಹೇಳಿದರು.
बाबा रामदेव ने मदरसे में फहराया तिरंगा, जानें क्या कहा #IndependenceDay2022https://t.co/ohJCzfqaEX
— India TV Hindi (@IndiaTVHindi) August 15, 2022
ಮಸೀದಿಯ ಮೇಲೆ ಧ್ವಜಾರೋಹಣ ಮಾಡಿದ ಬಗ್ಗೆ ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ರಾಮದೇವ ಬಾಬಾರವರು, “ಇದು ನಮಗೆ ಹೊಸದೇನಿಲ್ಲ ಬದಲಾಗಿ ಸನಾತನ ಪರಂಪರೆಯಾಗಿದೆ. ಈ ಪರಂಪರೆಯ ಮಾಧ್ಯಮದಿಂದ ನಾವು ಸಂಘಟಿತರಾಗಿ ರಾಷ್ಟ್ರದ ಏಕತೆ ಮತ್ತು ಅಖಂಡತೆಗಾಗಿ ಹಾಗೆಯೇ ರಾಷ್ಟ್ರದ ಗೌರವ ಮತ್ತು ವೈಭವ ಹೆಚ್ಚಿಸಲು ಕಟಿಬದ್ಧರಾಗಿದ್ದೇವೆ. ನಾವೆಲ್ಲರೂ ಒಂದಾಗಿ ಸ್ವಾತಂತ್ರ್ಯದ ಅಮೃತಮಹೋತ್ಸವದಿಂದ ಶತಾಬ್ದಿ ವರ್ಷದ ವರೆಗೆ ‘ಸಾರೆ ಜಹಾಂ ಸೆ ಅಚ್ಛಾ’ ಅನುಸಾರ ಈ ಭಾರತವನ್ನು ಸಾಕಾರಗೊಳಿಸೋಣ. ಇದರಿಂದ ಭಾರತ ಮತ್ತೊಮ್ಮೆ ಮಹಾಶಕ್ತಿ, ಪರಮ ವೈಭವಶಾಲಿ, ಜಗದ್ಗುರು, ವಿಶ್ವಗುರು ಮತ್ತು ‘ಸೂಪರ ಪಾವರ’ ಆಗಲಿದೆ.” ಎಂದು ಹೇಳಿದರು.
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon