ವಿಶ್ವ ಹಿಂದೂ ಪರಿಷತ್ತಿನ ಆರೋಪ

ಹರದೋಯಿ (ಉತ್ತರಪ್ರದೇಶ) – ಇಲ್ಲಿ ೨ ಯುವಕರಲ್ಲಿ ವಾದ ಬಗೆಹರಿಸುವುದಕ್ಕಾಗಿ ಆಗಸ್ಟ್ ೩ ರಂದು ರಾತ್ರಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಚಿವ ಅಮನ ಸಿಂಹ ಚೌಹಾಣ ಇವರು ಇಲ್ಲಿಯ ಪೊಲೀಸ ಠಾಣೆಗೆ ಹೋಗಿದ್ದರು. ಎರಡು ಗುಂಪಿನ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವಾಗ ಪೊಲೀಸರು ಚೌಹಾಣ ಇವರಿಗೆ ಅಮಾನುಷವಾಗಿ ಥಳಿಸಿದ್ದಾರೆ. ಆದ್ದರಿಂದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಎಷ್ಟು ಅಮಾನುಷವಾಗಿ ಥಳಿಸಿದ್ದಾರೆ ಎಂದರೆ ಅವರನ್ನು ಲಕ್ಷ್ಮಣಪುರಿಯ ಆಸ್ಪತ್ರೆಗೆ ವರ್ಗಾಯಿಸಬೇಕಾಯಿತು ಎಂದು ವಿಶ್ವ ಹಿಂದೂ ಪರಿಷತ್ತಿನ ಹರದೋಯಿ ಜಿಲ್ಲಾ ಸಚಿವ ಡಾ. ಆಶಿಷ್ ಮಾಹೇಶ್ವರೀ ಅರೋಪಿಸಿದರು.
ಡಾ. ಮಾಹೇಶ್ವರೀ ಇವರು ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯ ಶಹಬಾದಿನಲ್ಲಿ ರಾಜ ಮತ್ತು ಆಶು ಇವರಿಬ್ಬರಲ್ಲಿ ವಾದ ನಡೆಯಿತು. ಈ ಪ್ರಕರಣದಲ್ಲಿ ಹಿಂದೂ ಆಗಿರುವುದರಿಂದ ರಾಜ ಪರವಾಗಿ ನಿಂತಿರುವುದರಿಂದ ಚೌಹಾಣ ಪೊಲೀಸ ಠಾಣೆಗೆ ಹೋಗಿದ್ದರು ಆದರೆ ಅಲ್ಲಿಯ ಪೊಲೀಸ ನಿರೀಕ್ಷರು ಮತ್ತು ಸಿಬ್ಬಂದಿ ಚೌಹಾಣ ಇವರಿಗೆ ಅಮಾನುಷವಾಗಿ ಹೊಡೆದರು.
ಇನ್ನೊಂದು ಕಡೆಗೆ ಪೊಲೀಸ್ ಅಧೀಕ್ಷಕರು ದುರ್ಗೇಶ ಕುಮಾರ ಸಿಂಹ ಇವರು ರಾಜುವಿನ ಪರ ನಿಂತಿರುವುದರಿಂದ ಚೌಹಾಣ ಇವರ ಮತ್ತೊಂದು ಕಡೆಯವರ ಜೊತೆ ಹೊಡೆದಾಟ ನಡೆದಿದೆ. ಇದರಲ್ಲಿ ಚೌಹಾಣ ಗಾಯಗೊಂಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಮಾಡಿರುವ ಆರೋಪದ ಬಗ್ಗೆ ಸಿಂಹ, ಆರೋಪಗಳ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಸಂಪಾದಕೀಯ ನಿಲುವು
|
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ