
ಹೊಸ ದೆಹಲಿ – ಕೊರೊನಾದ ಲಸಿಕೀಕರಣ ಅಭಿಯಾನ ಮುಗಿದ ನಂತರ ತಕ್ಷಣ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿ ಎ ಎ) ಜಾರಿ ಮಾಡಲಾಗುವುದು, ಎಂದು ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರು ಘೋಷಣೆ ಮಾಡಿದರು. ಬಂಗಾಲದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಇವರು ಅಮಿತ ಶಾಹ ಇವರನ್ನು ಭೇಟಿ ಮಾಡಿದ್ದರು. ಆಗ ಶಾಹ ಇವರು ಅಧಿಕಾರಿ ಇವರಿಗೆ ಆಶ್ವಾಸನೆ ನೀಡಿರುವುದಾಗಿ ಮಾಹಿತಿ ಅವರು ನೀಡಿದರು. ಡಿಸೆಂಬರ್ ೧೧, ೨೦೧೯ ರಂದು ಸಂಸತ್ತಿನಲ್ಲಿ ಸಿಎಎ ಕಾನೂನು ಸಮ್ಮತಿ ಪಡೆಯಿತು ಮತ್ತು ಮರುದಿನವೇ ಅಧಿಸೂಚನೆ ಜಾರಿ ಮಾಡಲಾಯಿತು. ಕೇಂದ್ರ ಸರಕಾರ ಇಲ್ಲಿಯವರೆಗೆ ಕಾನೂನಿಗಾಗಿ ನಿಯಮಾವಳಿ ತಯಾರಿಸಿಲ್ಲ. ಅನೇಕ ವಿರೋಧಿ ಪಕ್ಷದವರು ಸಿಎಎ ಗೆ ವಿರೋಧಿಸಿದರೂ ಅದನ್ನು ಜಾರಿ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
Will implement #CAA once #COVID19 vaccination drive is over: #AmitShah https://t.co/vx7gTvRxeQ
— DNA (@dna) August 2, 2022
ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು ?
‘ಧಾರ್ಮಿಕ ಕಿರುಕುಳಕ್ಕೆ ಬೇಸತ್ತು ಅಪಘಾನಿಸ್ತಾನ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಡಿಸೆಂಬರ ೩೧, ೨೦೧೪ ವರೆಗೆ ಭಾರತದಲ್ಲಿ ವಲಸೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರಸಿ, ಮತ್ತು ಕ್ರೈಸ್ತ ಸಮುದಾಯದ ಜನರನ್ನು ಕಾನೂನು ಬಾಹಿರವಾಗಿ ವಲಸೆ ಬಂದಿರುವವರು ಎಂದು ತಿಳಿಯುವುದಿಲ್ಲ ಮತ್ತು ಅವರಿಗೆ ಭಾರತದ ನಾಗರಿಕತ್ವ ನೀಡಲು’ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಶ್ರೀಲಂಕಾದ ತಮಿಳು, ಮ್ಯಾನ್ಮಾರದ ಮುಸಲ್ಮಾನ್ ಮತ್ತು ಪಾಕಿಸ್ತಾನದ ಮುಸಲ್ಮಾನರಲ್ಲಿರುವ ಜಾತಿಗಳ ವ್ಯಕ್ತಿಗಳಿಗೆ ಈ ಕಾನೂನಿನ ಲಾಭ ಸಿಗುವುದಿಲ್ಲ.
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University