ಕಾಂಗ್ರೆಸ್ಸಿನ ಮೂರು ಶಾಸಕರು ಅಮಾನತು

ಕೊಲ್ಕತ್ತಾ (ಬಂಗಾಲ) – ಬಂಗಾಲದ ಹಾವಡ ಪೊಲೀಸರು ಜಾರ್ಖಂಡದ ಕಾಂಗ್ರೆಸ್ಸಿನ ಶಾಸಕ ಇರ್ಫಾನ್ ಅನ್ಸಾರಿ, ರಾಜೇಶ ಕಶ್ಯಪ, ಮತ್ತು ನಮನ ಬಿಸ್ಕಲ್ ಇವರನ್ನು ಬಂಧಿಸಿದ್ದಾರೆ. ಈ ಶಾಸಕರ ಹತ್ತಿರ ದೊಡ್ಡ ಪ್ರಮಾಣದಲ್ಲಿ ನಗದು ದೊರೆತಿದೆ. ಈ ನಗದು ಎಣಿಸುವುದಕ್ಕಾಗಿ ನೋಟು ಎಣಿಸುವ ಯಂತ್ರ ತರಿಸಲಾಗಿತ್ತು. ಈ ಶಾಸಕರು ಹಾವಡಾದ ವಾಹನದಲ್ಲಿ ಹೋಗುವಾಗ ಅವರನ್ನು ನಿಲ್ಲಿಸಿ ಮತ್ತು ವಾಹನದ ತಪಾಸಣೆ ನಡೆಸಲಾಯಿತು. ಆಗ ಈ ನಗದು ಹಣ ದೊರಕಿದೆ. ಜಾರ್ಖಂಡದ ಶಾಸಕರು ಬಂಗಾಲಕ್ಕೆ ಏಕೆ ಬಂದಿದ್ದರು ? ಅವರು ಇಷ್ಟು ದೊಡ್ಡ ಪ್ರಮಾಣದ ನಗದು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು? ಹೀಗೆ ಅನೇಕ ಪಶ್ನೆಗಳು ಮುಂದೆ ಬಂದಿವೆ. ವಿಚಾರಣೆಯ ನಂತರ ಅದರ ಮಾಹಿತಿ ಸಿಗುವ ಸಾಧ್ಯತೆಯಿದೆ. ಕಾಂಗ್ರೆಸ್ ನಿಂದ ಈ ಶಾಸಕರನ್ನು ಅಮಾನತುಗೊಳಿಸಲಾಗಿದೆ.
Now, trouble in #Jharkhand: @INCIndia suspends 3 MLAs caught with huge amount of cash in #WestBengal https://t.co/3EIVSB4oYp @anshumalini3
— The Tribune (@thetribunechd) July 31, 2022
ಸಂಪಾದಕೀಯ ನಿಲುವುಈ ವಿಷಯವಾಗಿ ಜನರಿಗೆ ಆಶ್ಚರ್ಯ ಅನಿಸಲಾರದು ! ದೇಶದ ಬಹುತೇಕ ಜನಪ್ರತಿನಿಧಿಗಳಲ್ಲಿರುವ ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿಯು ಅವರು ಜನಪ್ರತಿನಿಧಿಗಳಾದ ನಂತರ ಸಂಗ್ರಹವಾಗುತ್ತದೆ. ಇದನ್ನು ಜನರು ಕಳೆದ ಅನೇಕ ದಶಕಗಳಿಂದ ನೋಡುತ್ತಿದ್ದಾರೆ, ಎಲ್ಲ ಭ್ರಷ್ಟಾಚಾರಿಗಳು ಸಂಘಟಿತರಾಗಿರುವುದರಿಂದ ಅವರ ಮೇಲೆ ಕೇವಲ ರಾಜಕೀಯ ಸೇಡು ತೀರಿಸಲು ಯಾವಾಗಲಾದರೊಮ್ಮೆ ಕ್ರಮ ಕೈಗೊಳ್ಳಲಾಗುತ್ತದೆ. ದೇಶದ ಭ್ರಷ್ಟಾಚಾರ ನಿಜವಾಗಿಯೂ ಬೇರೆ ಸಮೇತ ನಾಶ ಮಾಡಬೇಕಾದರೆ ಧರ್ಮಚರಣೀ ಜನಪ್ರತಿನಿಧಿಗಳೇ ಬೇಕು. |
ಕೊಲೆ ಪ್ರಕರಣವನ್ನು ವಿರೋಧಿಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ!
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC