
ಕೋಝಿಕೊಡ (ಕೇರಳ) – ಕೇರಳದಲ್ಲಿ ಅನ್ಯ ರಾಜ್ಯಗಳಿಂದ ಅಪ್ರಾಪ್ತ ಹುಡಗಿಯರನ್ನು ಕಳ್ಳಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ ಕೊಝಿಕೊಡ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಅರ್.ಪಿ.ಎಫ್) ಓರ್ವ ಚರ್ಚ್ ಪಾದ್ರಿಯನ್ನು ಬಂಧಿಸಿದ್ದಾರೆ. ಜೇಕಬ ವರ್ಗೀಸ ಆರೋಪಿಯಾಗಿದ್ದು ಅವನು ಕರುಣಾ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕನಾಗಿದ್ದನು. ಅವನು ಸ್ವತಂತ್ರ ಪೇಂಟೇಕೋಸ್ಟ್ ಚರ್ಚಿಗೆ ಸಂಬಂಧಪಟ್ಟವನಾಗಿದ್ದನು. ಕೊಝಿಕೊಡ ರೈಲ್ವೆ ಪೊಲೀಸರು ಸುಮಾರು ೧೨ ಹುಡುಗಿಯ ಕಳ್ಳಸಾಗಾಣಿಕೆ ಮಾಡುವ ದಲ್ಲಾಳಿಗಳನ್ನು ಬಂಧಿಸಿದ್ದರು. ಲೋಕೇಶ ಕುಮಾರ ಮತ್ತು ಶಾಮಲಾಲ ಎಂದು ಅವರ ಹೆಸರಾಗಿದ್ದು ಅವರು ರಾಜಸ್ಥಾನದ ನಿವಾಸಿಗಳು. ಈ ಹುಡುಗಿಯರನ್ನು ಮಂಗಳವಾರ ಗುಜರಾತಿನ ವಡೋದರಾ ಇಲ್ಲಿಂದ ಓಖಾ ಎಕ್ಸ್ಪ್ರೆಸ್ ನಿಂದ ಕರೆತರಲಾಯಿತು. ಅವರಿಗೆ ಕರುಣಾ ಚಾರಿಟೇಬಲ್ ಟ್ರಸ್ಟ್ ನ ಆಸ್ಪತ್ರೆಯಲ್ಲಿ ಇರಿಸುವುವರಿದ್ದರು. ಪ್ರಸ್ತುತ ಆ ಹುಡಗಿಯರು ರೈಲ್ವೇ ಪೊಲೀಸರ ಬಾಲ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಹುಡುಗಿಯರು ಬಡ ಕುಟುಂಬದವರು. ಕರುಣಾ ಚಾರಿಟೇಬಲ್ ಟ್ರಸ್ಟ್ ಆವಶ್ಯಕ ದಾಖಲೆಗಳಿಲ್ಲದೆ ಕಾರ್ಯನಿರತವಾಗಿರುವುದು ಕಂಡು ಬಂದಿದೆ. ಆರೋಪಿಗಳು ಪೊಲೀಸರಿಗೆ ತಮ್ಮ ಹೇಳಿಕೆ ನೀಡುವಾಗ ಅಲುವಾ ಪುಲುವಾಹಿಯ ಆಸ್ಪತ್ರೆಯಲ್ಲಿ ಹುಡುಗಿಯರಿಗೆ ಶಿಕ್ಷಣ ಸಿಗಲಿ ಎಂದು ಕೇರಳಕ್ಕೆ ಕರೆತರಲಾಗಿದೆ ಎಂದರು.
#Kerala Pastor arrested for alleged #humantrafficking of minor girlshttps://t.co/o1KOphv2ju
— DNA (@dna) July 28, 2022
ಸಂಪಾದಕೀಯ ನಿಲುವುಇಂತಹ ಸಮಾಚಾರಗಳು ತಥಾಕಥಿತ ಜಾತ್ಯತೀತ ಪ್ರಸಾರ ಮಾಧ್ಯಮಗಳು ಪ್ರಸಾರ ಮಾಡುವುದಿಲ್ಲವೆಂದು ನೆನಪಿಟ್ಟುಕೊಳ್ಳಿ ! |
ಶಾಮಲಿ (ಉತ್ತರಪ್ರದೇಶ) ಇಲ್ಲಿನ ಆಯುಷ ಮಲಿಕನಿಂದ ಇಸ್ಲಾಂ ತೊರೆದು ಪುನಃ ಹಿಂದೂ ಧರ್ಮ ಸ್ವೀಕಾರ ! : Shamili Love Jihad
ಗಂಡನಿಗಿಂತ ಹೆಚ್ಚು ಆದಾಯವಿರುವ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯ : The Karnataka High Court
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ