ತನಿಖೆಗಾಗಿ ಮದರಸಾದ ೮ ಮೌಲ್ವಿಗಳು ವಶಕ್ಕೆ !

ಗೌಹಾಟಿ (ಅಸ್ಸಾಂ) – ರಾಜ್ಯದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಮದರಸಾದಲ್ಲಿ ರೂಪಿಸಲಾಗಿದ್ದ ಸಂಚನ್ನು ಅಸ್ಸಾಂ ಪೊಲೀಸರು ವಿಫಲಗೊಳಿಸಿದರು. ಮೊರಿಗಾಂವ್ನ ಮೊಯಿರಾಬಾರಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಜುಲೈ ೨೭ ರಂದು ಮದರಸಾ ನಡೆಸುತ್ತಿದ್ದ ಮುಫ್ತಿ ಮುಸ್ತಫಾ ಎಂಬ ಜಿಹಾದಿಯನ್ನು ಬಂಧಿಸಿದರು. ಈ ವೇಳೆ ಮದರಸಾ ಹಾಗೂ ಕೆಲ ನಿವಾಸಗಳಲ್ಲಿ ದಾಳಿ ನಡೆಸಲಾಗಿದ್ದು, ಮದರಸಾಕ್ಕೆ ಬೀಗ ಜಡಿಯಲಾಗಿದೆ.
ಮುಫ್ತಿ ಮುಸ್ತಫಾ ಈ ಭಯೋತ್ಪಾದಕ ಗುಂಪಿನ ಪ್ರಮುಖ ಸಂಚಾಲಕ ಎಂದು ಹೇಳಲಾಗುತ್ತಿದೆ. ಆತ ಮೊಯಿರಾಬಾರಿಯಲ್ಲಿ ೨೦೧೮ ರಿಂದ ‘ಜಾಮಿ-ಉಲ್-ಹುದಾ’ ಎಂಬ ಮದಸರಾ ನಡೆಸುತ್ತಿದ್ದಾನೆ. ಪೊಲೀಸರು ಮುಸ್ತಫಾನಿಂದ ಮೊಬೈಲ್ ಫೋನ್, ಬ್ಯಾಂಕ್ ಪಾಸ್ಬುಕ್ ಮತ್ತು ಅನೇಕ ಅಕ್ಷೆಪಾರ್ಹ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಮದರಸಾದಿಂದ ೮ ಮೌಲ್ವಿಗಳನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ನೆರೆಯ ಬಾಂಗ್ಲಾದೇಶ ಹಾಗೂ ಇತರ ಅನೇಕ ದೇಶಗಳಿಂದ ಈ ಮದರಸಾಕ್ಕೆ ಹಣ ಸರಬರಾಜು ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.
Assam: Mufti arrested, 8 Maulvis detained for running a jihadi camp in madrasa and preaching hatred through Islamic textshttps://t.co/nXymuqS9CS
— OpIndia.com (@OpIndia_com) July 28, 2022
ಬಾಂಗ್ಲಾದೇಶದ ಮೂಲಕ ಭಯೋತ್ಪಾದಕರ ಒಳನುಸುಳುವಿಕೆ ! – ಪೊಲೀಸ್ ಅಧೀಕ್ಷಕರು
ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸ್ ಅಧೀಕ್ಷಕರಾದ ಭಾಸ್ಕರ್ ಜ್ಯೋತಿ ಮಹಂತ್ ಅವರು, ಭಯೋತ್ಪಾದಕ ಸಂಘಟನೆಗಳು ಅಸ್ಸಾಂ ಅನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿವೆ. ಅವರು ಬಾಂಗ್ಲಾದೇಶದ ಮೂಲಕ ರಾಜ್ಯಕ್ಕೆ ನುಸುಳಿ ಮುಸ್ಲಿಂ ಯುವಕರಿಗೆ ‘ಹದೀಸ್’ ಕಲಿಸಿ ಕೆರಳಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಇದುವರೆಗೆ ಹಲವು ಮದರಸಾಗಳನ್ನು ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಬಳಸಿರುವುದು ಬೆಳಕಿಗೆ ಬಂದಿದ್ದರೂ ಸರಕಾರ ಏಕೆ ಅಂತಹ ಮದರಸಾಗಳನ್ನು ನಿಷೇಧಿಸುತ್ತಿಲ್ಲ ? |
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ
ಶ್ರೀರಾಮ ಮಂದಿರದ 10 ಕೋಟಿ ಮೌಲ್ಯದ ಜಮೀನು ಪ್ರಕರಣ: ಅತಿಕ್ರಮಣದಾರರ ದಾವೆ ವಜಾ : Achalapur Sri Rama Temple