ಪೊಲೀಸ್ ಉಪ ಅಧೀಕ್ಷಕರ ಮೇಲೆ ಡಂಪರ್ ಹತ್ತಿಸಿ ಕೊಲೆ

ಚಂಡೀಗಢ – ಮೇವಾತ್ನ ಪೊಲೀಸ್ ಉಪ ಅಧೀಕ್ಷಕ ಸುರೇಂದರ್ ಸಿಂಗ್ ಬಿಷ್ಣೋಯ್ ಅವರನ್ನು ಗಣಿ ಮಾಫಿಯಾದವರು ಹತ್ಯೆ ಮಾಡಿದ್ದಾರೆ. ಪೊಲೀಸರು ಪಚ್ಗಾಂವ್ನ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ಗಣಿಗಾರರನ್ನು ಬಂಧಿಸಲು ಹೋದಾಗ ಗಣಿ ಮಾಫಿಯಾಗೆ ಸೇರಿದ ಡಂಪರ್ ಚಾಲಕನು ಬಿಷ್ಣೋಯಿ ಅವರ ಮೇಲೆ ಡಂಪರ್ ಹತ್ತಿಸಿದ. ಈ ವೇಳೆ ಬಿಷ್ಣೋಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರು ಈ ವರ್ಷ ನಿವೃತ್ತಿ ಹೊಂದಲಿದ್ದರು. ಈ ಬಗ್ಗೆ ನುಹ್ನ ಪೊಲೀಸರು, ‘ಪರಾರಿಯಾಗಿರುವ ಗಣಿ ಮಾಫಿಯಾ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ’, ಎಂದು ಹೇಳಿದ್ದಾರೆ.
A deputy superintendent of police was killed by the mining mafia in Haryana’s Nuh district on Tuesday.
(@arvindojha ) https://t.co/rqmZKqAzu7— IndiaToday (@IndiaToday) July 19, 2022
೧. ಬೆಳಗ್ಗೆ ೧೧ ಗಂಟೆಗೆ ಬಿಷ್ಣೋಯ್ ಅವರಿಗೆ ‘ಸಂಬಂಧಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ’, ಎಂಬ ಮಾಹಿತಿ ಸಿಕ್ಕಿತು. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರೊಂದಿಗೆ ಸ್ಥಳಕ್ಕೆ ತಲುಪಿದರು.
೨. ಆ ಸಮಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಅದೇ ಸಮಯದಲ್ಲಿ, ಒಂದು ಡಂಪರ್ನಿಂದ ಹೋಗುತ್ತಿದ್ದ ಗಣಿ ಮಾಫಿಯಾ ಬಿಷ್ಣೋಯ ಅವರಿಗೆ ಡಿಕ್ಕಿ ಹೊಡೆದು ಅವರ ಮೇಲೆ ಡಂಪರ ಹತ್ತಿಸಿದರು.
೩. ಈ ಹಿಂದೆಯೂ ಹರಿಯಾಣಾದಲ್ಲಿ ಗಣಿ ಮಾಫಿಯಾ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆಗಳು ನಡೆದಿವೆ. ಸೋನಿಪತ್ನಲ್ಲಿ ಅಕ್ರಮ ಗಣಿಗಾರರನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಗಣಿ ಮಾಫಿಯಾ ದಾಳಿ ಮಾಡಿತ್ತು. ಆ ವೇಳೆ ಗಣಿ ಮಾಫಿಯಾ ಓರ್ವ ಪೊಲೀಸ್ ಸಬ್ ಇನ್ಸ್ಪೆಕ್ಟರ್ನ ಸಮವಸ್ತ್ರ ಹರಿದಿದ್ದಲ್ಲದೇ ಪೊಲೀಸ್ ಪೇದೆಯನ್ನು ಥಳಿಸಿದ್ದರು.
|
ಸಂಪಾದಕೀಯ ನಿಲುವು ಇದರಿಂದ ‘ಗಣಿ ಮಾಫಿಯಾಗಳಿಗೆ ಕಾನೂನಿನ ಭಯವಿಲ್ಲ’, ಎಂಬುದು ಕಂಡುಬರುತ್ತದೆ. ಸರಕಾರ ಅಂತಹವರ ವಿರುದ್ಧ ಶೀಘ್ರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅವರನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಬೇಕು ! |
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!