
ಧುಬರಿ (ಅಸ್ಸಾಂ) : ನನ್ನ ಪೂರ್ವಜರು ಹಿಂದೂಗಳಾಗಿದ್ದರು. ಹಿಂದೂಗಳ ಒಂದು ಚಿಕ್ಕ ಸಮೂಹದಿಂದ ನಡೆದಿರುವ ಅತ್ಯಾಚಾರದಿಂದ ನಮ್ಮ ಪೂರ್ವಜರು ಇಸ್ಲಾಂ ಸ್ವೀಕರಿಸಿದರು. ಅದಕ್ಕಾಗಿ ನಮ್ಮ ಮೇಲೆ ಯಾರೂ ಒತ್ತಡ ಹೇರಿರಲಿಲ್ಲ ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ ಪಕ್ಷದ ಅಧ್ಯಕ್ಷ ಮತ್ತು ಶಾಸಕ ಬದ್ರುದ್ದೀನ್ ಅಜ್ಮಲ್ ಸ್ಪಷ್ಟೀಕರಣ ನೀಡಿದರು. ಎರಡು ದಿನಗಳ ಹಿಂದೆ ಇವರು ಮುಸಲ್ಮಾನರಿಗೆ ಬಕ್ರೀದ್ ದಿನದಂದು ಗೋ ಹತ್ಯೆ ಮಾಡದಿರುವ ಕರೆ ನೀಡಿದ್ದರು.
‘हिंदुओं के एक छोटे समूह के अत्याचारों के कारण, मेरे पूर्वजों को खुद को इस्लाम में परिवर्तित करना पड़ा.’#Assam #AIUDF https://t.co/phepi2aKmh
— Zee News (@ZeeNews) July 8, 2022
೧. ಅಜ್ಮಲ್ ಮಾತು ಮುಂದುವರೆಸುತ್ತಾ, ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರ ಹಿಂದೂ ರಾಷ್ಟ್ರದ ಅಜೆಂಡಾ (ಕಾರ್ಯಸೂಚಿ) ಕೇವಲ ರಾಜಕೀಯ ನಾಟಕವಾಗಿದೆ. ಅದರ ಮೂಲಕ ಅವರಿಗೆ ಹಿಂದೂಗಳ ಶೇಕಡ ೫ ಮತಗಳು ಪಡೆಯುವ ಇರಾದೆ ಇದೆ. ಹಿಂದೂ ರಾಷ್ಟ್ರ ಒಂದು ಕನಸಾಗಿಯೇ ಉಳಿಯುವುದಿದೆ.
೨. ನೂಪುರ ಶರ್ಮಾ ಪ್ರಕರಣದ ಬಗ್ಗೆ ಅಜ್ಮಲ್, ನೂಪುರ ಶರ್ಮಾ ಇವರ ವಿರುದ್ಧ ಕೆಲವು ಮೂಲಭೂತವಾದಿ ಮುಸಲ್ಮಾನರು ಬೇಜವಾಬ್ದಾರಿಯ ಭೂಮಿಕೆ ವಹಿಸಿದ್ದಾರೆ. ಶಿರಚ್ಛೇದ ಮಾಡುವ ಬೆದರಿಕೆ ನೀಡುವ ಮೂರ್ಖತನ ಮಾಡುತ್ತಾರೆ, ಈ ರೀತಿ ಬೆದರಿಕೆ ನೀಡುವುದು ಇಸ್ಲಾಮಿನ ವಿರುದ್ಧವಾಗಿದೆ. ಮಹಮದ್ ಪೈಗಂಬರ್ ಇವರಿಗೆ ಕಲ್ಲು ಹೊಡೆಯಲಾಗಿತ್ತು ಆಗ ಏನಾದರೂ ಅಲ್ಲಾಹ್ ಆ ಕಲ್ಲು ಎಸೆದವರನ್ನು ಕೊಂದ್ದಿದರೆ ಇಸ್ಲಾಂ ಇಷ್ಟು ಬೆಳೆಯುತ್ತಿತ್ತೆ? ಇಂದು ಪ್ರಪಂಚದಲ್ಲಿ ೨೦೦ ಕೋಟಿ ಮುಸಲ್ಮಾನರು ಇದ್ದರೆ. ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಅವರು ಇಸ್ಲಾಮಿನ ಒಳ್ಳೆಯ ವಿಚಾರಗಳಿಂದ ಮತಾಂತರ ಹೊಂದಿದರು.
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ
ಶ್ರೀರಾಮ ಮಂದಿರದ 10 ಕೋಟಿ ಮೌಲ್ಯದ ಜಮೀನು ಪ್ರಕರಣ: ಅತಿಕ್ರಮಣದಾರರ ದಾವೆ ವಜಾ : Achalapur Sri Rama Temple