ಆಕ್ಷೇಪಾರ್ಯ ವೀಡಿಯೋ ತಯಾರಿಸುವಾಗ ನಾನು ಮದ್ಯದ ನಶೆಯಲ್ಲಿದ್ದೆ ಎಂದು ಹೇಳು, ಆಗ ನಿನ್ನನ್ನು ರಕ್ಷಿಸಬಹುದು

  • ಅಜ್ಮೇರ ಪೊಲೀಸ ಉಪ ಆಯುಕ್ತ ಸಂದೀಪ್ ಸಾರಸ್ವತ ಇವರಿಂದ ಸಲ್ಮಾನ್ ಚಿಸ್ತಿ ಎಂಬ ಆರೋಪಿಗೆ ಸಲಹೆ

  • ಸಾರಸ್ವತ ಇವರನ್ನು ಪದಚ್ಯುತಗೊಳಿಸಲಾಗಿದೆ

  • ಚಿಸ್ತಿ ಇವನು ಆಕ್ಷೇಪಾರ್ಯ ವೀಡಿಯೋ ಮೂಲಕ ನೂಪುರ ಶರ್ಮಾ ಇವರ ಶಿರಚ್ಛೇದ ಮಾಡುವ ಬೆದರಿಕೆ ಒಡ್ಡಿದ್ದ

ಜೈಪುರ – ಅಜಮೆರ ದರ್ಗಾದ ಕರ್ಮಚಾರಿ ಸಲ್ಮಾನ್ ಚಿಸ್ತಿ ಎಂಬವನು ನೂಪುರ ಶರ್ಮ ಇವರ ಶಿರಚ್ಛೇದ ನಡೆಸುವವರಿಗೆ ಸ್ವಂತ ಮನೆ ನೀಡುವ ಪ್ರಚೋದನಕಾರಿ ಕರೆ ನೀಡಿ ವಿಡಿಯೋ ತಯಾರಿಸಿದ್ದನು. ಈ ವಿಷಯಕ್ಕೆ ಆದ ವಿರೋಧದ ನಂತರ ಅಜ್ಮೀರ್ ಪೊಲೀಸ್ ಉಪ ಆಯುಕ್ತ ಸಂದೀಪ್ ಸಾರಸ್ವತ ಇವರು ಚಿಸ್ತಿ ಇವನನ್ನು ಬಂಧಿಸಿದ್ದರು. ಅವನಿಗೆ ಬಂಧಿಸಿ ಕರೆದುಕೊಂಡು ಹೋಗುವಾಗ ತಯಾರಿಸಲಾದ ಒಂದು ವೀಡಿಯೋ ಭಾಜಪದ ನಾಯಕರು ಪ್ರಸಾರಗೊಳಿಸಿದರು. ಈ ವೀಡಿಯೋದಲ್ಲಿ ಪೊಲೀಸ್ ಉಪ ಆಯುಕ್ತ ಸಂದೀಪ ಸಾರಸ್ವತ ಇವರು ಚಿಸ್ತಿ ಇವನಿಗೆ ಆಕ್ಷೇಪಾರ್ಯ ವೀಡಿಯೋ ಮಾಡುವಾಗ ನಾನು ಮದ್ಯದ ನಶೆಯಲ್ಲಿದ್ದೆ ಎಂದು ಹೇಳು, ಆಗ ನಿನ್ನನ್ನು ರಕ್ಷಿಸಬಹುದು ಎಂದು ಸಲಹೆ ನೀಡುವುದು ಕಾಣುತ್ತಿದೆ. ಅದರ ನಂತರ ಪೊಲೀಸರು ಚಿಸ್ತಿ ಮಧ್ಯದ ನಶೆಯಲ್ಲಿದ್ದನು ಎಂದು ಸುದ್ದಿ ಹರಡಿದರು.

ಈ ಘಟನೆಯಿಂದ ಸಾರಸ್ವತ ಇವರನ್ನು ಪದಚ್ಯುತಗೊಳಿಸಲಾಗಿದ್ದು. ಪ್ರಸ್ತುತ ಅವರನ್ನು ಪದದ ನಿರೀಕ್ಷೆಯಲ್ಲಿರುವವರ ಪಟ್ಟಿಯಲ್ಲಿ ಸೇರಿಸಲಾಗಿದೆ. ರಾಜಸ್ಥಾನ ಸರ್ಕಾರ ಸಾರಸ್ವತ ಇವರ ಘಟನೆಯ ವಿಚಾರಣೆಯ ಆದೇಶ ನೀಡಿದ್ದಾರೆ.

ಸಂಪಾದಕೀಯ ನಿಲುವು

  • ಇಂತಹ ಪೊಲೀಸ ಅಧಿಕಾರಿಗಳನ್ನು ಕೇವಲ ಪದಚ್ಯುತಗೊಳಿಸಿದರೆ ಸಾಕಾಗುವದಿಲ್ಲ ಅವರ ವಿರುದ್ಧ ಮೊಕ್ಕದ್ದಮೆ ನಡೆಸ ಜೈಲಿಗೆ ಕಳಿಸುವುದು ಆವಶ್ಯಕ
  • ಇಂತಹ ಪೊಲೀಸರು ಭಾರತದವರಾ ಅಥವಾ ಪಾಕಿಸ್ತಾನದವರಾ? ಹಿಂದೂಗಳ ಶಿರಚ್ಛೇದ ಮಾಡುವ ಬೆದರಿಕೆ ನೀಡುವ ಮೂಲಭೂತವಾದಿ ಮುಸಲ್ಮಾನರಿಗೆ ಶಿಕ್ಷೆಯಾಗುವುದಕ್ಕಾಗಿ ಪ್ರಯತ್ನಿಸುವ ಬದಲು ಅವರನ್ನು ರಕ್ಷಿಸುವ ಪ್ರಯತ್ನ ಮಾಡುವ ಪೊಲೀಸರು ಇದ್ದರೆ ಇದಕ್ಕಿಂತ ಸಂತಾಪದ ವಿಷಯ ಬೇರೆ ಏನು ಇದೆ ? ಇಂತಹ ಪೊಲೀಸರು ಮೂಲಭೂತವಾದಿಗಳ ಅರಾಜಕತೆ ಹರಡಿದ ಮೇಲೆ ಹಿಂದೂಗಳ ರಕ್ಷಣೆ ಏನು ಮಾಡುವರು ?
  • ರಾಜಸ್ಥಾನದಲ್ಲಿ ಹಿಂದೂ ದ್ವೇಷಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇರುವುದರಿಂದ ಇಂತಹ ಪೊಲೀಸರ ಮೇಲೆ ಕಠಿಣ ಕ್ರಮ ನಡೆಯುವುದು ಎಂದು ಅಪೇಕ್ಷಿಸುವುದೇ ತಪ್ಪು !