ಹತ್ತನೆ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ವೀಡಿಯೊ ಮೂಲಕ ಸಹಾಭಾಗ

ಕಾಶ್ಮೀರದಲ್ಲಿ ಜ್ಞಾನ ಇತ್ತು; ಆದರೆ ಶಕ್ತಿ ಇರಲ್ಲಿಲ್ಲ. ಆದ್ದರಿಂದ ಕಾಶ್ಮೀರದಿಂದ ಹಿಂದೂಗಳು ಪಲಾಯನ ಮಾಡಬೇಕಾಯಿತು. ಆದ್ದರಿಂದ ಹಿಂದೂಗಳಿಗೆ ಶಕ್ತಿ ಮತ್ತು ಭಕ್ತಿ ಎರಡರ ಆವಶ್ಯಕತೆ ಇದೆ. ಹಿಂದೂ ರಾಷ್ಟ್ರ ಸ್ಥಾಪನೆ, ಇದು ನಮ್ಮ ಗುರಿ ಆಗಿದೆ. ಒಗ್ಗಟಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಬೇಕಾಗಿದೆ. ಅದಕ್ಕಾಗಿ ಕಷ್ಟ ಪಡಬೇಕಾಗಬಹುದು. ಸಮಯ ನೀಡಬೇಕು. ಸಮಾಜದಲ್ಲಿ ಭಯದ ವಾತಾವರಣ ಇದೆ. ಹಿಂದೂಗಳ ಮನಸ್ಸಿಂದ ಈ ಭಯ ಹೋಗಿಸಿ ಸಮಾಜದಲ್ಲಿ ವಿಶ್ವಾಸ ಮತ್ತು ಕ್ಷಾತ್ರತೇಜ ನಿರ್ಮಾಣ ಮಾಡಬೇಕಾಗುವುದು. ಕಾಶ್ಮೀರ, ಕೇರಳ, ದೆಹಲಿ, ಬಿಹಾರ, ಕರ್ನಾಟಕದಲ್ಲಿ ಏನು ನಡೆಯಿತು, ಇದು ಮುಂಬರುವ ಕಠಿಣ ಕಾಲದ ಮುನ್ಸೂಚನೆ ಆಗಿದೆ. ಇದನ್ನು ಎದುರಿಸಲು ಧ್ಯೇಯ ಅವಶ್ಯಕವಾಗಿದೆ. ಇದಕ್ಕಾಗಿ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಶಕ್ತಿ ಹೆಚ್ಚಿಸಬೇಕು. ಅಖಿಲ ಭಾರತೀಯ ಹಿಂದೂರಾಷ್ಟ್ರ ಅಧಿವೇಶನದಿಂದ ಸಿಕ್ಕಿರುವ ಮಾರ್ಗದರ್ಶನಕ್ಕನುಸಾರ ನಾವು ಕಾರ್ಯ ಮಾಡಬೇಕಾಗಿದೆ, ಎಂದು ಕರ್ನಾಟಕದ ಶ್ರೀ ರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಅವರು ಕರೆ ನೀಡಿದರು.
ಆಗಿನ ಗೋವಾ ಸರಕಾರವು ರಾಜ್ಯಕ್ಕೆ ಬರದಂತೆ ನಿಷೇಧಿಸಿರುವ ಕಾರಣ ಶ್ರೀ ರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಅವರು ‘ವೀಡಿಯೊ’ ಮೂಲಕ ಹತ್ತನೇ ಅಖಿಲ ಭಾರತೀಯ ಹಿಂದೂರಾಷ್ಟ್ರ ಅಧಿವೇಶನದ ಪ್ರತಿನಿಧಿಗಳ ಜತೆ ಸಂವಾದ ನಡೆಸಿದರು.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!