ಸಮಸ್ತಿಪುರ (ಬಿಹಾರ)ದಲ್ಲಿ ಬಡತನದಿಂದ ಬ್ರಾಹ್ಮಣ ಕುಟುಂಬದ ೫ ಜನರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ರಾಜಕೀಯ ಪಕ್ಷಗಳ ಮೌನ !

ಸಮಸ್ತಿಪುರ (ಬಿಹಾರ) – ಕೆಲವು ದಿನಗಳ ಹಿಂದೆ, ಬಡತನದ ಕಾರಣದಿಂದ ಮನೋಜ್ ಝಾ ಎಂಬ ಬ್ರಾಹ್ಮಣ ಕುಟುಂಬದ ೫ ಸದಸ್ಯರು ನೇಣುಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಂತರ ಇದುವರೆಗೆ ಯಾವುದೇ ರಾಜಕೀಯ ಪಕ್ಷಗಳು ಈ ಬಗ್ಗೆ ಹೆಚ್ಚಿನ ಸಂವೇದನೆಯನ್ನು ತೋರಿಸಿಲ್ಲ. ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಟ್ವೀಟ್ ಮಾಡುವ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ; ಆದರೆ, ಅವರು ಈ ಕುಟುಂಬಗಳ ಜಾತಿಯನ್ನು ಉಲ್ಲೇಖಿಸುವುದನ್ನು ತಪ್ಪಿಸಿದ್ದಾರೆ.

ಸಂಪಾದಕೀಯ ನಿಲುವು

* ಬಡತನದಿಂದಾಗಿ `ದಲಿತ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಇದುವರೆಗೆ ಎಲ್ಲ ರಾಜಕೀಯ ಪಕ್ಷಗಳೂ ಕಣ್ಣೀರು ಹಾಕುತ್ತಿದ್ದವು; ಆದರೆ ಬ್ರಾಹ್ಮಣರ ಆತ್ಮಹತ್ಯೆಯಿಂದ ಇಲ್ಲಿ ಎಲ್ಲರೂ ಮೌನವಾಗಿದ್ದಾರೆ ಎಂದು ಯಾರಿಗಾದರೂ ಅನಿಸುತ್ತಿದ್ದರೆ ತಪ್ಪೇನು?

* ಮೀಸಲಾತಿಯ ಲಾಭ ಪಡೆದು ಅನೇಕ ಹಿಂದುಳಿದ ವರ್ಗದವರು ಶ್ರೀಮಂತರಾಗಿದ್ದಾರೆ. ಹಾಗಾಗಿ ಈಗ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಯೋಜನೆಯನ್ನು ಆರಂಭಿಸುವ ಅವಶ್ಯಕತೆಯಿದೆ ಎಂಬುದು ಈ ಘಟನೆಯಿಂದ ಗಮನಕ್ಕೆ ಬರುತ್ತದೆ !