ಅಯೋಧ್ಯೆಯಲ್ಲಿನ ದಾಕ್ಷಿಣಾತ್ಯ ಶೈಲಿಯ ಮೊದಲನೇ ದೇವಸ್ಥಾನದ ಪ್ರಾಣಪ್ರತಿಷ್ಠಾಪನೆಗೆ ಯೋಗಿ ಆದಿತ್ಯನಾಥರ ಉಪಸ್ಥಿತಿ

ಅಯೋಧ್ಯಾ (ಉತ್ತರಪ್ರದೇಶ) – ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಇಲ್ಲಿ ದ್ರಾವಿಡ ಶೈಲಿಯಲ್ಲಿ ಕಟ್ಟಲಾದ ರಾಮಲಲಾ ಸದನ ದೇವಸ್ಥಾನದ ಪ್ರಾಣಪ್ರತಿಷ್ಠಾಪನೆಯಲ್ಲಿ ಉಪಸ್ಥಿತರಿದ್ದರು. ಶ್ರೀರಾಮಜನ್ಮಭೂಮಿಯಿಂದ ಸ್ವಲ್ಪವೇ ದೂರದಲ್ಲಿ ದಕ್ಷಿಣ ಭಾರತೀಯ ಶೈಲಿಯಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದೆ. ಇದು ಭಗವಾನ ಶ್ರೀರಾಮರ ಕುಲದೇವತೆಯಾದ ಭಗವಾನ ರಂಗನಾಥನರವರ ದೇವಸ್ಥಾನವಿರುವ ಅಯೋಧ್ಯೆಯಲ್ಲಿನ ಮೊದಲನೇ ದೇವಸ್ಥಾನವಾಗಲಿದೆ. ಇಲ್ಲಿ ಭಗವಾನ ಶ್ರೀರಾಮ, ಲಕ್ಷ್ಮಣ ಹಾಗೂ ಸೀತೆಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡಲಾಯಿತು.