
ಅಯೋಧ್ಯಾ (ಉತ್ತರಪ್ರದೇಶ) – ಇಲ್ಲಿನ ಶ್ರೀರಾಮಜನ್ಮಭೂಮಿಯಲ್ಲಿ ಕಟ್ಟಲಾಗುವ ಭವ್ಯವಾದ ಶ್ರೀರಾಮಮಂದಿರದ ಗರ್ಭಗೃಹದ ಭೂಮಿಪೂಜೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರ ಹಸ್ತದಿಂದ ಜೂನ ೧ರ ಬೆಳಿಗ್ಗೆ ನಡೆಸಲಾಯಿತು. ಈ ಸಮಯದಲ್ಲಿ ಸ್ವಾಮಿ ಪರಮಾನಂದರೊಂದಿಗೆ ಶ್ರೀರಾಮಮಂದಿರ ಆಂದೋಲನಕ್ಕೆ ಸಂಬಂಧಿಸಿದ ೧೦೦ಕ್ಕೂ ಹೆಚ್ಚಿನ ಸಂತರು ಉಪಸ್ಥಿತರಿದ್ದರು. ಈ ಭೂಮಿಪೂಜೆಯೊಂದಿಗೆ ದೇವಸ್ಥಾನದ ಕಟ್ಟಡ ಕಾಮಗಾರಿಯ ಎರಡನೇ ಹಂತವು ಆರಂಭವಾಗಿದೆ. ಮೊದಲನೇ ಹಂತದಲ್ಲಿ ದೇವಸ್ಥಾನದ ಕಟ್ಟೆಯ ಕಾಮಗಾರಿಯನ್ನು ನಡೆಸಲಾಗಿದೆ. ಈ ಗರ್ಭಗುಡಿಯ ಕಾಮಗಾರಿಯು ಡಿಸೆಂಬರ್ ೨೦೨೩ರ ವರೆಗೆ ಪೂರ್ಣವಾಗಲಿದೆ, ಎಂದು ಹೇಳಲಾಗುತ್ತಿದೆ. ಹಾಗೆಯೇ ೨೦೨೪ರ ಮಕರಸಂಕ್ರಾಂತಿಯಂದು ಈ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮರ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯುವುದು ಎಂದು ಅಂದಾಜಿಸಲಾಗಿದೆ.
VIDEO: Uttar Pradesh Chief Minister Yogi Adityanath lays the foundation stone for #RamMandir ‘s Garbhagriha in #Ayodhya pic.twitter.com/izYUvZ4mxw
— TOI Lucknow News (@TOILucknow) June 1, 2022
ಭಗವಾನ ವಾಲ್ಮೀಕಿ, ಮಾತಾ ಶಬರಿ ಹಾಗೂ ಜಟಾಯು ಇವರ ದೇವಸ್ಥಾನಗಳನ್ನೂ ಕಟ್ಟಲಾಗುವುದು
ಶ್ರೀರಾಮಮಂದಿರದೊಂದಿಗೆ ಈ ಪರಿಸರದಲ್ಲಿ ಭಗವಾನ ವಾಲ್ಮಿಕಿ, ಶಬರಿ ಮಾತೆ, ಜಟಾಯು, ಸೀತಾ ಮಾತೆ, ವಿಘ್ನೇಶ್ವರ (ಗಣೇಶ) ಹಾಗೂ ಶೇಷಾವತಾರ (ಲಕ್ಷ್ಮಣ) ಇವರ ದೇವಸ್ಥಾನಗಳನ್ನು ಕಟ್ಟುವ ಯೋಜನೆಯೂ ಇದೆ. ಈ ಕಟ್ಟಡ ಕಾಮಗಾರಿಯು ಒಟ್ಟೂ ೭೦ ಎಕರೆ ಪರಿಸರದಲ್ಲಿ ಹಾಗೂ ಉದ್ಯಾನದ ಹೊರಗಿರುವ ದೇವಸ್ಥಾನದ ಪರಿಸರದಲ್ಲಿ ಮಾಡಲಾಗುವುದು.
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation