
ಬೆಂಗಳೂರು- ಸಾವಿರಾರು ವರ್ಷಗಳಿಂದ ಕೇಸರಿ ಧ್ವಜವನ್ನು ಗೌರವಿಸಲಾಗುತ್ತಿದೆ. ಕೇಸರಿ ಧ್ವಜ ತ್ಯಾಗದ ಪ್ರತೀಕವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಸರಿ ಧ್ವಜ ಒಂದು ದಿನ ಭಾರತದ ರಾಷ್ಟ್ರ ಧ್ವಜವಾಗಲಿದೆ, ಇದರಲ್ಲಿ ಯಾವುದೇ ಸಂದೇಹವಿಲ್ಲ. ತ್ಯಾಗದ ಭಾವನೆಯನ್ನು ಕಾಪಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಕೇಸರಿ ಧ್ವಜವನ್ನು ಮುಂದಿಟ್ಟು ಪೂಜಿಸುತ್ತದೆ. ಸಂವಿಧಾನಕ್ಕನುಗುಣವಾಗಿ ತ್ರಿವರ್ಣ ಧ್ವಜ ರಾಷ್ಟ್ರಧ್ವಜವಾಗಿದೆ ಮತ್ತು ತ್ರಿವರ್ಣಕ್ಕೆ ಯಾವ ಗೌರವವನ್ನು ನೀಡಬೇಕೋ, ಅದನ್ನು ನಾವು ನೀಡುತ್ತೇವೆ ಎಂದು ರಾಜ್ಯದ ಭಾಜಪ ಹಿರಿಯ ಮುಖಂಡ ಮತ್ತು ಶಾಸಕ ಕೆ.ಎಸ್. ಈಶ್ವರಪ್ಪನವರು ಹೇಳಿಕೆ ನೀಡಿದ್ದರು. ಅನೇಕ ರಾಜಕೀಯ ಮುಖಂಡರು ಈ ಹೇಳಿಕೆಗೆ ನಿಷೇಧ ವ್ಯಕ್ತಪಡಿಸಿದ್ದಾರೆ.
Former minister and BJP leader KS Eshwarappa on Sunday said “bhagwa” or saffron flag may become the national flag of the country in the future, courting a fresh controversyhttps://t.co/Y7GuChT1Tc
— Hindustan Times (@htTweets) May 30, 2022
ವಿಶೇಷವೆಂದರೆ ಕೆ.ಎಸ್. ಈಶ್ವರಪ್ಪನವರು ಫೆಬ್ರುವರಿ ೨೦೨೨ ರಲ್ಲಿಯೂ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಆ ಸಮಯದಲ್ಲಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಸರಿ ಧ್ವಜ ಒಂದು ದಿನ ತ್ರಿವರ್ಣದ ಸ್ಥಾನವನ್ನು ಅಲಂಕರಿಸಲಿದೆ; ಆದರೆ ಅದು ಇಷ್ಟು ಶೀಘ್ರವಾಗಿ ಸಾಧ್ಯವಾಗಲಾರದು. ಅದಕ್ಕೆ ಬಹಳ ಸಮಯ ತಗಲಬಹುದು; ಆದರೆ ಮುಂಬರುವ ಕಾಲದಲ್ಲಿ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಲಿದೆನೆಂದು ಹೇಳಿದ್ದರು. ಅವರ ಹೇಳಿಕೆಯು ರಾಜಕೀಯ ವಲಯಗಳಲ್ಲಿ ಕೋಲಾಹಲವೆಬ್ಬಿಸಿತ್ತು.
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ
ಶ್ರೀರಾಮ ಮಂದಿರದ 10 ಕೋಟಿ ಮೌಲ್ಯದ ಜಮೀನು ಪ್ರಕರಣ: ಅತಿಕ್ರಮಣದಾರರ ದಾವೆ ವಜಾ : Achalapur Sri Rama Temple
ಮಧ್ಯಪ್ರದೇಶದ ರಿವಾದಲ್ಲಿ ಗೋ-ಕಳ್ಳಸಾಗಣೆ: ಇಬ್ಬರು ಮುಸಲ್ಮಾನ ಮಹಿಳೆಯರ ಸೆರೆ : Rewa Beef Smuggling Arrests
ನ್ಯಾಯಾಲಯದ ಬೇಸಿಗೆ ರಜೆಗಳ ನಂತರ ವಿಚಾರಣೆಯಾದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ! : Supreme Court