ಬೆಂಗಳೂರಿನಲ್ಲಿ ರೈತರ ನೇತಾರ ರಾಕೇಶ ಟಿಕೈತರ ಮೇಲೆ ಮಸಿ ಎರಚಲಾಯಿತು !

ರೈತರ ನೇತಾರ ರಾಕೇಶ ಟಿಕೈತರವರ ಮೇಲೆ ಗಾಂಧಿ ಭವನದಲ್ಲಿನ ಒಂದು ಪತ್ರಿಕಾ ಪರಿಷತ್ತಿನಲ್ಲಿ ಮಸಿ ಎರಚಲಾಯಿತು

ಬೆಂಗಳೂರು (ಕರ್ನಾಟಕ) – ರೈತರ ನೇತಾರ ರಾಕೇಶ ಟಿಕೈತರವರ ಮೇಲೆ ಇಲ್ಲಿನ ಗಾಂಧಿ ಭವನದಲ್ಲಿನ ಒಂದು ಪತ್ರಿಕಾ ಪರಿಷತ್ತಿನಲ್ಲಿ ಮಸಿ ಎರಚಲಾಯಿತು. ಪೊಲೀಸರು ಮಸಿ ಎರಚಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಒಂದು ಪ್ರಕರಣದಲ್ಲಿ ಸ್ಪಷ್ಟೀಕರಣ ನೀಡಲು ಟಿಕೈತರವರು ಇಲ್ಲಿಗೆ ಬಂದಿದ್ದರು. ಆಗ ಅವರಿಗೆ ಅಲ್ಲಿ ಉಪಸ್ಥಿತರಿದ್ದ ಕೆಲವು ಜನರೊಂದಿಗೆ ವಾದ ನಡೆಯಿತು ಹಾಗೂ ಇದರಿಂದಾಗಿ ಅವರ ಮೇಲೆ ಮಸಿ ಎರಚಲಾಯಿತು. ಇದರೊಂದಿಗೆ ಇಲ್ಲಿನ ಕುರ್ಚಿಗಳನ್ನೂ ಪರಸ್ಪರರ ಮೇಲೆ ಎಸೆಯಲಾಯಿತು. ಟಿಕೈತರವರು ಸ್ಥಳೀಯ ಪೊಲೀಸರು ಯೋಗ್ಯ ಸುರಕ್ಷಾ ವ್ಯವಸ್ಥೆಯನ್ನು ಮಾಡಿಲ್ಲ, ಈ ಘಟನೆಯು ಸರಕಾರದ ಬೆಂಬಲದಿಂದಲೇ ನಡೆದಿದೆ ಎಂದು ಆರೋಪಿಸಿದ್ದಾರೆ.