ಯಾರು ಎಷ್ಟೇ ಹೋರಾಟ ಮಾಡಿದರೂ ಅಂತಿಮ ಗೆಲುವು ಸತ್ಯದ್ದೇ ಆಗಿರುತ್ತದೆ, ಎಂಬುದನ್ನು ಅವರು ನೆನಪಿನಲ್ಲಿಡಬೇಕು !

ಜ್ಞಾನವಾಪಿ ಮಸೀದಿಯನ್ನು ರಕ್ಷಿಸಲು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿಂದ ಕಾನೂನು ಹೋರಾಟ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಜ್ಞಾನವಾಪಿ ಮಸೀದಿಯ ರಕ್ಷಣೆಗಾಗಿ `ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಕಾನೂನು ಹೋರಾಟ ನಡೆಸಲಿದೆ ಎಂದು ಅವರ ಸಭೆಯಲ್ಲಿ ನಿರ್ಧರಿಸಲಾಯಿತು. ದೇಶದಲ್ಲಿ ಧಾರ್ಮಿಕ ಸೌಹಾರ್ದತೆ ಕೆಡಿಸುವ ಷಡ್ಯಂತ್ರದ ವಿರುದ್ಧ `ಪ್ರಾರ್ಥನಾಸ್ಥಳ ಉಳಿಸಿ’ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲು ಸಹ ಈ ಸಭೆಯಲ್ಲಿ ನಿರ್ಧರಿಸಲಾಯಿತು. (ಹಿಂದೂಗಳು ಕೂಡ `ಪ್ರಾರ್ಥನಾಸ್ಥಳಗಳನ್ನು ಮರಳಿ ಪಡೆಯಿರಿ’ ಎಂಬ ಜಾಗೃತಿ ಆಂದೋಲನ ನಡೆಸಿದರೆ ಆಶ್ಚರ್ಯಪಡಬೇಕೆಂದಿಲ್ಲ ! – ಸಂಪಾದಕರು)