ಅಮರನಾಥ ಯಾತ್ರೆಯ ಮೊದಲೇ ಜಿಹಾದಿ ಭಯೋತ್ಪಾದಕ ಸಂಘಟನೆಯಿಂದ ಬೆದರಿಕೆಯ ಪತ್ರ

ಶ್ರೀನಗರ (ಜಮ್ಮೂ-ಕಾಶ್ಮೀರ) – ಬರುವ ಜೂನ್ ೩೦ರಿಂದ ಅಮರನಾಥ ಯಾತ್ರೆಯು ಆರಂಭವಾಗಲಿದ್ದು ಅಗಸ್ಟ ೧೧ರಂದು ಅದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ‘ದ ರೆಜಿಸ್ಟನ್ಸ್ ಫ್ರಂಟ್’ ಜಿಹಾದಿ ಭಯೋತ್ಪಾದಕ ಸಂಘಟನೆಯು ಬೆದರಿಕೆಯ ಪತ್ರವನ್ನು ಪ್ರಸಾರಿತಗೊಳಿಸಿದೆ. ಇದರಲ್ಲಿ ‘ನಾವು ಯಾತ್ರೆಯನ್ನು ವಿರೋಧಿಸುವುದಿಲ್ಲ; ಆದರೆ ಎಲ್ಲಿಯ ವರೆಗೆ ಯಾತ್ರಿಗಳು ಕಾಶ್ಮೀರದ ಸಮಸ್ಯೆಯಲ್ಲಿ ಸಹಭಾಗಿಯಾಗುವುದಿಲ್ಲವೋ ಅಲ್ಲಿಯ ವರೆಗೆ ಅವರು ಸುರಕ್ಷಿತರಾಗಿದ್ದಾರೆ. ಅವರು (ಸರಕಾರ) ಅಮರನಾಥ ಯಾತ್ರೆಯನ್ನು ತಮ್ಮ ಕೊಳಕು ರಾಜಕಾರಣಕ್ಕಾಗಿ ಮಾಡಲಿದ್ದಾರೆ. ಕೇವಲ ೧೫ ಸಾವಿರದಿಂದ ೮ ಲಕ್ಷ ಯಾತ್ರಿಕರ ನೋಂದಣಿ ಹಾಗೂ ೧೫ ರಿಂದ ೮೦ ದಿನಗಳ ವರೆಗಿನ ಸಮಯವು ಕೇವಲ ಕಾಶ್ಮೀರದ ಪರಿಸ್ಥಿತಿಯ ಸಂವೇದನಾಶೀಲತೆಯನ್ನು ಉದ್ರೇಕಿಸಲಿಕ್ಕಾಗಿ ಇದೆ. ಈ ಫಾಸಿಸ್ಟ (ಹುಕುಮಶಾಹಿ) ಆಡಳಿತವನ್ನು ಅಮರನಾಥ ಯಾತ್ರೆಯ ಹೆಸರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಣಿವೆಗೆ ತರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ’ ಎಂದು ಬರೆಯಲಾಗಿದೆ.
ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿ: ಉಗ್ರ ಸಂಘಟನೆ ಬೆದರಿಕೆ#AmaranathaYatra #JammuKashmirhttps://t.co/kbgMolGj6M
— Prajavani (@prajavani) May 23, 2022
೪೩ ದಿನಗಳ ವರೆಗೆ ನಡೆಯುವ ಅಮರನಾಥ ಯಾತ್ರೆಯಲ್ಲಿನ ಯಾತ್ರಿಗಳ ಸಂಖ್ಯೆಯು ಮೊದಲಿಗಿಂತಲೂ ಹೆಚ್ಚಾಗುವ ಸಾಧ್ಯತೆಯಿದೆ. ಈ ಸಮಯದಲ್ಲಿ ರಾಮಬನ ಮತ್ತು ಚಂದನವಾಸಿಯಲ್ಲಿ ದೊಡ್ಡ ಛಾವಣಿ ಇರಬಹುದು. ಈ ಹಿನ್ನೆಲೆಯಲ್ಲಿ ಬಿಗಿಬಂದೋಬಸ್ತಿನ ಸುರಕ್ಷಾವ್ಯವಸ್ಥೆಯನ್ನು ಇಡಲಾಗುವುದು.
ಸಂಪಾದಕೀಯ ನಿಲುವುಕಾಶ್ಮೀರದ ಸಂದರ್ಭದಲ್ಲಿ ಯಾತ್ರಿಗಳು ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದನ್ನು ನಿರ್ಧರಿಸಲು ಭಯೋತ್ಪಾದಕರು ಯಾರು ? ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗೂ ಪ್ರತಿಯೊಬ್ಬ ಹಿಂದೂವಿಗೆ ಈ ಬಗ್ಗೆ ಮಾತನಾಡುವ ಅಧಿಕಾರವಿದೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!