ಬದರಿನಾಥ ಧಾಮದ ದ್ವಾರಗಳನ್ನು ತೆರೆಯಲಾಗಿದೆ !

ಮುಂದಿನ ೬ ತಿಂಗಳಲ್ಲಿ ದರ್ಶನ ಪಡೆಯಬಹುದು !

ಬದ್ರಿನಾಥ (ಉತ್ತರಾಖಂಡ) – ಕೊರೋನಾ ಮಹಾಮಾರಿಯಿಂದಾಗಿ ಕಳೆದ ೨ ವರ್ಷಗಳಿಂದ ಮುಚ್ಚಲಾಗಿದ್ದ ಬದ್ರಿನಾಥ ಧಾಮದ ದ್ವಾರಗಳನ್ನು ಮೇ ೮ರ ಮುಂಜಾವಿನಲ್ಲಿ ತೆರೆಯಲಾಯಿತು. ಈಗ ಭಕ್ತರಿಗೆ ಮುಂದಿನ ೬ ತಿಂಗಳ ವರೆಗೆ ಬದ್ರಿವಿಶಾಲನ ದರ್ಶನ ಲಭಿಸಲಿದೆ. ಈ ಸಂದರ್ಭದಲ್ಲಿ ಬದ್ರಿನಾಥ ಧಾಮವನ್ನು ೧ ಸಾವಿರದ ೨೦೦ ಕೆಜಿ ತೂಕದ ಹೂವುಗಳಿಂದ ಅಲಂಕರಿಸಲಾಗಿತ್ತು. ದೇಶಾದ್ಯಂತ ಅಪಾರ ಸಂಖ್ಯೆಯಲ್ಲಿ ಬಂದಂತಹ ಭಕ್ತರು ಬದ್ರಿವಿಶಾಲನ ದರ್ಶನ ಪಡೆದರು. ಇದಕ್ಕೂ ಮುನ್ನ ಮೇ ೬ರಂದು ಕೇದಾರನಾಥದ ದ್ವಾರಗಳನ್ನು ತೆರೆಯಲಾಗಿದೆ.