|

ಶ್ರೀನಗರ (ಜಮ್ಮೂ-ಕಾಶ್ಮೀರ) – ಜಮ್ಮೂ-ಕಾಶ್ಮೀರದಲ್ಲಿನ ವಿಧಾನಸಭಾ ಮತದಾರ ಕ್ಷೇತ್ರದ ಪುನರ್ರಚನೆಗಾಗಿ ನೇಮಿಸಲಾದ ವ್ಯಾಪ್ತಿ ನಿರ್ಧರಿಸುವ ಆಯೋಗವು ತನ್ನ ವರದಿಯನ್ನು ಸಾದರಪಡಿಸಿದೆ. ಇದರ ಅನುಸಾರ ರಾಜ್ಯದಲ್ಲಿನ ವಿಧಾನಸಭೆಯ ಒಟ್ಟೂ ೭ ಜಾಗಗಳನ್ನು ಹೆಚ್ಚಿಸುವ ಪ್ರಸ್ತಾಪವನ್ನು ನೀಡಲಾಗಿದೆ. ಜಮ್ಮೂ-ಕಾಶ್ಮೀರದಲ್ಲಿ ವಿಧಾನಸಭೆಯ ಜಾಗಗಳ ಸಂಖ್ಯೆಯು ೮೩ ರಿಂದ ೯೦ರ ವರೆಗೆ ಏರಿಕೆಯಾಗಲಿದೆ. ಹೆಚ್ಚಾದ ೭ ರ ಪೈಕಿ ೬ ಜಾಗಗಳು ಜಮ್ಮೂವಿನಲ್ಲಿದ್ದರೆ ೧ ಕಾಶ್ಮೀರದಲ್ಲಿದೆ. ಹಾಗೆಯೇ ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳಿಗಾಗಿ ವಿಧಾನಸಭೆಯಲ್ಲಿ ೨ ಜಾಗಗಳನ್ನು ಮೀಸಲಿಡುವ ಪ್ರಸ್ತಾಪವನ್ನೂ ನೀಡಲಾಗಿದೆ. ಪಾಕವ್ಯಾಪ್ತ ಕಾಶ್ಮೀರಕ್ಕಾಗಿ ೨೪ ಜಾಗಗಳನ್ನು ಖಾಲಿ ಇಡಲಾಗಿದೆ. ಈ ಹಿಂದೆಯೂ ಈ ಜಾಗಗಳನ್ನು ಖಾಲಿ ಇಡಲಾಗಿತ್ತು. ಈಗ ಈ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗುವುದು. ಅದರ ನಂತರ ರಾಜಪತ್ರ ಅಧಿಸೂಚನೆಯ ಮೂಲಕ ಇದರ ಕಾರ್ಯಾಚರಣೆಯನ್ನು ನಡೆಸಲಾಗುವುದು. ಈ ವರದಿಯಿಂದಾಗಿ ಈಗ ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯನ್ನು ನಡೆಸುವ ಮಾರ್ಗವು ಮುಕ್ತವಾಗಿದೆ.
#JammuandKashmir #delimitation panel award notified; #Kashmir to have 47 Assembly seats, #Jammu 43https://t.co/4uohzeAXkV
— The Tribune (@thetribunechd) May 6, 2022
ಸದ್ಯ ಜಮ್ಮೂವಿನ ಭಾಗದಲ್ಲಿ ವಿಧಾನಸಭೆಯ ೬೭ ಕ್ಷೇತ್ರಗಳಿದ್ದರೆ, ಕಾಶ್ಮೀರದಲ್ಲಿ ೪೬ ಕ್ಷೇತ್ರಗಳಿವೆ. ಈ ವರದಿಯ ಕಾರ್ಯಾಚರಣೆಯ ನಂತರ ಜಮ್ಮೂವಿನಲ್ಲಿ ವಿಧಾನಸಭೆಯ ಕ್ಷೇತ್ರಗಳ ಸಂಖ್ಯೆಯು ೪೩ ಆಗಲಿದ್ದರೆ, ಕಾಶ್ಮೀರ ವಿಭಾಗದ ಕ್ಷೇತ್ರಗಳ ಸಂಖ್ಯೆಯು ೪೭ ಆಗಲಿದೆ. ಮೊದಲಿಗೆ ಅನುಸೂಚಿತ ಪಂಗಡಕ್ಕಾಗಿ ೯ ಕ್ಷೇತ್ರಗಳನ್ನು ಮೀಸಲಿಡಲಾಗಿದೆ. ಇವುಗಳ ಪೈಕಿ ೬ ಜಮ್ಮೂ ವಿಭಾಗದಲ್ಲಿದ್ದರೆ ೩ ಕಾಶ್ಮೀರ ವಿಭಾಗದಲ್ಲಿವೆ.
ಪಾಕಿಸ್ತಾನವು ಭಾರತೀಯ ರಾಜದೂತರ ಬಳಿ ಆಕ್ಷೇಪವನ್ನು ನೋಂದಾಯಿಸಿದೆ !
ಇಸ್ಲಾಮಾಬಾದ (ಪಾಕಿಸ್ತಾನ) – ಜಮ್ಮೂ ಕಾಶ್ಮೀರದ ವಿಧಾನಸಭಾ ಮತದಾರ ಕ್ಷೇತ್ರದ ಪುನರ್ರಚನೆಯಾದ ನಂತರ ಪಾಕಿಸ್ತಾನವು ಭಾರತದ ರಾಜದೂತರನ್ನು ಕರೆದು ಅವರ ಬಳಿ ಆಕ್ಷೇಪವನ್ನು ನೋಂದಾಯಿಸಿದೆ. ಪಾಕಿಸ್ತಾನವು ‘ನಾವು ಪುನರ್ರಚನೆಯ ವರದಿಯನ್ನು ತಿರಸ್ಕರಿಸುತ್ತೇವೆ. ಈ ಪುನರ್ರಚನೆಯ ಉದ್ದೇಶವು ಮುಸಲ್ಮಾನರನ್ನು ನಾಗರೀಕತೆಯ ಅಧಿಕಾರದಿಂದ ವಂಚಿಸಲು ಹಾಗೂ ಅವರನ್ನು ದುರ್ಬಲರನ್ನಾಗಿಸಲು ಇದೆ’ ಎಂದು ಹೇಳಿದೆ.
ಪಾಕಿಸ್ತಾನದ ವಿದೇಶಿ ಮಂತ್ರಾಲಯದಿಂದ ‘ಈ ಪುನರ್ರಚನೆಯ ಹಿಂದೆ ಭಾರತದಲ್ಲಿನ ಗುಪ್ತ ಯೋಜನೆಗಳು ಅಡಗಿವೆ. ಈ ಮೂಲಕ ಮುಸಲ್ಮಾನರ ವರ್ಚಸ್ಸನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದೆ. (ಪಾಕಿಸ್ತಾನವು ವಿಭಜನೆಯ ನಂತರ ಹಿಂದೂಗಳನ್ನು ಏನು ಮಾಡಿದರು ಮತ್ತು ಸದ್ಯವೂ ಹಿಂದೂಗಳ ವಿಷಯದಲ್ಲಿ ಏನು ನಡೆಯುತ್ತಿದೆ, ಎಂಬುದನ್ನು ಹೇಳಬೇಕು ! ಪಾಕಿಸ್ತಾನವು ಭಾರತಕ್ಕೆ ಮುಸಲ್ಮಾನರ ಸಂದರ್ಭದಲ್ಲಿ ಕೇಳುವುದಕ್ಕಿಂತಲೂ ಚೀನಾದಲ್ಲಿ ಮುಸಲ್ಮಾನರ ಸ್ಥಿತಿ ಹೇಗಿದೆ, ಎಂಬುದರ ಬಗ್ಗೆ ಮಾತನಾಡುವ ಧೈರ್ಯವನ್ನು ತೋರಿಸಬೇಕಿದೆ ! – ಸಂಪಾದಕರು)
ಸಂಪಾದಕೀಯ ನಿಲುವುಭಾರತವು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಆದುದರಿಂದ ಪಾಕಿಸ್ತಾನವು ಭಾರತದ ನಿರ್ಣಯಗಳ ಸಂದರ್ಭದಲ್ಲಿ ಮೂಗು ತೂರಿಸಬಾರದು, ಎಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಳ್ಳಬೇಕಿದೆ ! |
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ಮುಸ್ಲಿಮರು ಇದ್ದಿದ್ದರೆ, ಕಳ್ಳತನದ ಆರೋಪದ ಮೇಲೆ ಅವರ ‘ಎನ್ಕೌಂಟರ್’ ಮಾಡಲಾಗುತ್ತಿತ್ತು!’
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ