ದೆಹಲಿಯಲ್ಲಿ ಬಾಂಬ್ಸ್ಫೋಟ ನಡೆಸುವ ಷಡ್ಯಂತ್ರ ಬಯಲು !

ಕರ್ನಾಲ (ಹರಿಯಾಣಾ) – ರಾಜಧಾನಿ ದೆಹಲಿಯಲ್ಲಿ ಬಾಂಬ್ಸ್ಫೋಟಗಳನ್ನು ನಡೆಸುವ ದೊಡ್ಡ ಷಡ್ಯಂತ್ರವನ್ನು ಧ್ವಂಸಗೊಳಿಸಲಾಯಿತು. ಇಲ್ಲಿ ಕರ್ನಾಲ ಮತ್ತು ಪಂಜಾಬ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಿಂದ ಗುರಪ್ರೀತ, ಅಮನದೀಪ, ಪರಮಿಂದರ ಮತ್ತು ಭೂಪಿಂದರ ಎಂಬ ೪ ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಈ ನಾಲ್ವರು ಕರ್ನಾಲದಲ್ಲಿನ ಬಸ್ತಾರಾ ಟೋಲನಾಕೆಯಿಂದ ಒಂದು ಇನೋವಾ ವಾಹನದಿಂದ ಹೋಗುತ್ತಿರುವಾಗ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ಇದರಲ್ಲಿ ಆರ್.ಡಿ. ಎಕ್ಸ್ ಇರುವುದಾಗಿಯೂ ಹೇಳಲಾಗುತ್ತಿದೆ. ಈ ಮದ್ದುಗುಂಡುಗಳು ಎಷ್ಟೊಂದು ದೊಡ್ಡ ಪ್ರಮಾಣದಲ್ಲಿದ್ದವು ಅಂದರೆ ಅನೇಕ ನಗರಗಳಲ್ಲಿ ಈ ಮೂಲಕ ದೊಡ್ಡ ಸ್ಫೋಟಗಳನ್ನು ನಡೆಸಬಹುದಾಗಿತ್ತು. ಈ ಭಯೋತ್ಪಾದಕರು ನಾಂದೇಡ(ಮಹಾರಾಷ್ಟ್ರ)ಗೆ ಹೋಗುವವರಿದ್ದರು. ಅವರು ದೆಹಲಿಯಲ್ಲಿ ದೊಡ್ಡ ಸ್ಫೋಟವನ್ನು ನಡೆಸುವವರಿದ್ದರು, ಎಂದು ಪೊಲೀಸರಿಗೆ ಸಂಶಯವಿತ್ತು.
4 Khalistani terrorists arrested from Karnal, weapons and explosives ‘drone-delivered’ from Pakistan seizedhttps://t.co/VGtGzIdzpK
— OpIndia.com (@OpIndia_com) May 5, 2022
ಬಂಧಿಸಲಾದ ಖಲಿಸ್ತಾನಿ ಭಯೋತ್ಪಾದಕರು ನಿರ್ಬಂಧಿಸಲಾದ ‘ಬಬ್ಬರ ಖಾಲಸಾ ಇಂಟರನ್ಯಾಶನಲ್; ಎಂಬ ಸಂಘಟನೆಗೆ ಸಂಬಂಧಿಸಿದ್ದಾರೆ. ಈ ನಾಲ್ವರೂ ಪಂಜಾಬಿನವರಾಗಿದ್ದಾರೆ. ಇವರು ಹರವಿಂದರ ಸಿಂಗ ಅಲಿಯಾಸ ರಿಂಡಾ ಎಂಬ ಭಯೋತ್ಪಾದಕನೊಂದಿಗೆ ಸಂಬಂಧಿಸಿದ್ದಾರೆ. ರಿಂಡಾ ಎಂಬ ಖಲಿಸ್ತಾನಿ ಭಯೋತ್ಪಾದಕನು ಸದ್ಯ ಪಾಕಿಸ್ತಾನದಲ್ಲಿ ಅಡಗಿದ್ದಾನೆ. ರಿಂಡಾನು ಈ ಶಸ್ತ್ರಗಳನ್ನು ಪಾಕಿಸ್ತಾನದಿಂದ ಪಂಜಾಬಿನಲ್ಲಿರುವ ಫಿರೋಜಪುರದಲ್ಲಿ ಡ್ರೋನ ಮೂಲಕ ಕಳುಹಿಸಿದ್ದನು.
ಸಂಪಾದಕೀಯ ನಿಲುವುಪುನಃ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಖಲಿಸ್ತಾನಿ ಭಯೋತ್ಪಾದಕರ ಸಂಚಲನೆಯನ್ನು ಬಗ್ಗುಬಡಿಲು ಕೇಂದ್ರ ಸರಕಾರವು ಕಠೋರ ಕ್ರಮಗಳನ್ನು ಕೈಗೊಳ್ಳುವುದು ಆವಶ್ಯಕವಾಗಿದೆ ! |
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ