
ಚಂಡೀಗಢ (ಪಂಜಾಬ) – ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನರವರ ಮೇಲೆ ಬೈಸಾಖಿಯ (ವೈಶಾಖ ಮಾಸದ ಮೊದಲನೇ ದಿನ ಉತ್ತರ ಭಾರತದಲ್ಲಿ ಆಚರಿಸಲಾಗುವ ಉತ್ಸವ) ದಿನ ಸರಾಯಿ ಕುಡಿದು ತಖ್ತ ಶ್ರೀ ದಮದಮಾ ಸಾಹಿಬಕ್ಕೆ ಹೋಗಿರುವ ಆರೋಪವನ್ನು ಹೊರಿಸಲಾಗಿದೆ. ಭಗವಂತ ಮಾನರವರು ಮದ್ಯದ ಮತ್ತಿನಲ್ಲಿರುವ ಅವಸ್ಥೆಯಲ್ಲಿ ತಖ್ತ ಶ್ರೀ ದಮದಮಾ ಸಾಹಿಬಕ್ಕೆ ಭೇಟಿ ನೀಡುವುದು ಸಿಖ್ಖ ಧರ್ಮದ ಆಚಾರಸಂಹಿತೆಯ ಉಲ್ಲಂಘನೆಯಾಗಿದೆ, ಎಂದು ಶಿರೋಮಣಿ ಗುರುದ್ವಾರಾ ಪ್ರಬಂಧಕ ಸಮಿತಿಯು ಹೇಳಿದೆ. ಸಮಿತಿಯು ಭಗವಂತ ಮಾನರವರಿಗೆ ತಪ್ಪನ್ನು ಒಪ್ಪಿಕೊಂಡು ಸಿಖ್ಖ ಸಮುದಾಯದ ಬಳಿ ಕ್ಷಮೆ ಕೇಳಲು ಹೇಳಿದೆ.
Sacrilege accusations against Punjab CM Bhagwant Mann as he enters Gurudwara in drunken state, SGPC and SAD seek apology, AAP refuteshttps://t.co/ejDhHTNwMV
— OpIndia.com (@OpIndia_com) April 16, 2022
ಈ ಹಿಂದೆ ಅಕಾಲಿ ದಳದ ಪ್ರಮುಖರಾದ ಸುಖಬೀರ ಬಾದಲರವರು ಭಗವಂತ ಮಾನರವರ ಮೇಲೆ ಸಿಖ್ಖರ ಭಾವನೆಗಳನ್ನು ನೋಯಿಸಿರುವುದಾಗಿ ಆರೋಪ ಮಾಡಿದ್ದರು. ಭಗವಂತ ಮಾನರವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಬಗ್ಗೆಯೂ ಬಾದಲ ರವರು ಮನವಿ ಮಾಡಿದ್ದರು.
ಮುಖ್ಯಮಂತ್ರಿಗಳ ಮೇಲಿನ ಆರೋಪವು ನಿರಾಧಾರವಾಗಿದೆ – ಆಪ
ಅಕಾಲಿ ದಳದ ಪ್ರಮುಖರಾದ ಸುಖಬೀರ ಬಾದಲರವರು ಮುಖ್ಯಮಂತ್ರಿ ಭಗವಂತ ಮಾನರವರ ಮೇಲೆ ಮಾಡಿರುವ ಆರೋಪವನ್ನು ಆಮ್ ಆದಮಿ ಪಕ್ಷದ ಜ್ಯೇಷ್ಠ ನೇತಾರ ಹಾಗೂ ಪಕ್ಷದ ವಕ್ತಾರರಾದ ಮಲವಿಂದರ ಸಿಂಗ ಕಾಂಗರವರು ತಿರಸ್ಕರಿಸಿದ್ದಾರೆ. ಮುಖ್ಯಮಂತ್ರಿಗಳ ಮೇಲಿನ ಆರೋಪವು ನಿರಾಧಾರವಾಗಿರುವುದಾಗಿ ಅವರು ಹೇಳಿದ್ದಾರೆ.
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon