ಭೋಪಾಲ್‌ನಲ್ಲಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಿಂದ ಹೋಗುವ ಹನುಮ ಜಯಂತಿಯ ಮೆರವಣಿಗೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ !

೧೬ ಷರತ್ತುಗಳನ್ನು ವಿಧಿಸಿ ಇತರೆಡೆ ಮೆರವಣಿಗೆಗೆ ಅನುಮತಿ !

  • ಭೋಪಾಲ್ ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ ?
  • ಭಾರತವು ಜಾತ್ಯತೀತ ರಾಷ್ಟ್ರವಾಗಿರುವಾಗ, ಹಿಂದೂ ಧಾರ್ಮಿಕ ಮೆರವಣಿಗೆಗಳು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಾದುಹೋಗಲು ಸಾಧ್ಯವಿಲ್ಲ, ಎಂದು ಪೋಲೀಸ್ ಮತ್ತು ಆಡಳಿತ ಇವರು ಹೇಳುವಾಗ ನಾಚಿಕೆ ಆಗುವುದಿಲ್ಲವೇ ?
  • ಮಧ್ಯಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಪರಿಸ್ಥಿತಿ ಬರಬಾರದು, ಎಂಬುದು ಹಿಂದೂಗಳಿಗೆ ಅನಿಸುತ್ತದೆ !
  • ಗಲಭೆಗಳು ನಡೆಯುವುದು ಹಿಂದೂ ಮೆರವಣಿಗೆಗಳಿಂದಲ್ಲ, ಆದರೆ ಮತಾಂಧರಿಂದ ನಡೆಯುತ್ತದೆ ಇದು ಸ್ಪಷ್ಟವಾಗಿರುವಾಗ ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಮಸೀದಿಗಳೆಗೆ ಅಲ್ಲ ಬದಲಾಗಿ ಹಿಂದೂಗಳ ಮೆರವಣಿಗೆಯ ಮೇಲೆ ಷರತ್ತು ಹೇರಲಾಗುತ್ತದೆ, ಇದು ಹಿಂದೂಗಳಿಗೆ ನಾಚಿಗ್ಗೇಡು !

ಭೋಪಾಲ್ (ಮಧ್ಯಪ್ರದೇಶ) – ಇಲ್ಲಿಯ ಖೇಡಾಪತಿ ಹನುಮಾನ್ ಮಂದಿರದಿಂದ ಹಳೆ ಭೋಪಾಲ್‌ವರೆಗಿನ ರಸ್ತೆಯಲ್ಲಿ ಹನುಮ ಜಯಂತಿಯಂದು ಮೆರವಣಿಗೆ ನಡೆಸಬೇಕೆಂಬ ಬೇಡಿಕೆಯನ್ನು ಭದ್ರತಾ ಕಾರಣಗಳಿಗಾಗಿ ಪೊಲೀಸರು ತಿರಸ್ಕರಿಸಿದ್ದಾರೆ. ಪೊಲೀಸರು, ಈ ಮೆರವಣಿಗೆಯನ್ನು ನಗರದ ಇತರ ಭಾಗಗಳಲ್ಲಿಯೂ ಸಹ ನಡೆಸಬಹುದು; ಆದರೆ ಈ ಪ್ರದೇಶದಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ.’ ಎಂದು ಹೇಳಿದಾಗ ಬೇರೆ ಮಾರ್ಗದಿಂದ ಈ ಮೆರವಣಿಗೆಯನ್ನು ನಡೆಸುವುದು ನಿರ್ಧರಿಸಲಾಯಿತು; ಆದರೆ ಆ ಸಮಯದಲ್ಲೂ ಆಡಳಿತವು ೧೬ ಷರತ್ತುಗಳೊಂದಿಗೆ ಅವಕಾಶ ನೀಡಿತ್ತು.

‘ಈ ಪ್ರದೇಶದಿಂದ ಧಾರ್ಮಿಕ ಮೆರವಣಿಗೆಗಳನ್ನು ನಡೆಸುವುದು ಅಪಾಯಕಾರಿಯಾಗಬಹುದು’, ಎಂದು ಹೇಳಿದ್ದರಿಂದ ಆಡಳಿತವರ್ಗದಿಂದ ಈ ನಿರ್ಧಾರ ಕೂಗೊಳ್ಳಲಾಯಿತು ಎಂದು ಹೇಳಲಾಗುತ್ತಿದೆ. ರಾಜ್ಯದ ಖರಗೋಣೆಯಲ್ಲಿ ಶ್ರೀರಾಮನವಮಿಯಂದು ನಡೆದ ಹಿಂಸಾಚಾರದ ನಂತರ, ಆಡಳಿತವು ಹನುಮ ಜಯಂತಿಯಂದು ಮೆರವಣಿಗೆ ನಡೆಸುವಾಗ ೧೬ ಷರತ್ತುಗಳನ್ನು ಹಾಕಿತು. ಇದರಲ್ಲಿ ಮೆರವಣಿಗೆಗಳಲ್ಲಿ ಯಾವುದೇ ಆಕ್ಷೇಪಾರ್ಹ ಘೋಷಣೆಗಳನ್ನು ಮಾಡಬಾರದು, ಯಾವುದೇ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಹಾಕಬಾರದು, ‘ಡಿಜೆ’ (ದೊಡ್ಡ ಸಂಗೀತ ವಾದ್ಯದಲ್ಲಿ) ಯಾವ ಹಾಡುಗಳನ್ನು ನುಡಿಸಲಾಗುತ್ತದೆ ?, ಅದರ ಪಟ್ಟಿಯನ್ನು ನೀಡುವುದು, ತ್ರಿಶೂಲ ಮತ್ತು ಗಧೆಯನ್ನು ಹೊರುತುಪಡಿಸಿ ಇತರ ಶಸ್ತ್ರಗಳನ್ನು ಬಳಸಬಾರದು, ಬಿಡಿ, ಸಿಗರೇಟ ಇತ್ಯಾದಿ ಮಾದಕ ವಸ್ತುಗಳನ್ನು ಬಳಸಬಾರದು; ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಆಯೋಜಕರೇ ಹೊಣೆ ಎಂದು ಹೇಳಲಾಗಿದೆ.