ಸೆಗಣಿಯಿಂದ ಸಂಯುಕ್ತ ಉತ್ಪಾದನೆಗಳನ್ನು ತಯಾರಿಸುವ ಬಗ್ಗೆ ಅಧ್ಯಯನ ಆರಂಭವಾಗಿದೆ !

ನವದೆಹಲಿ – ಗೋಶಾಲೆಗಳ ವ್ಯಾವಸಾಯಿಕ ವ್ಯಾವಹಾರಿಕತೆಯನ್ನು ಪರಿಶೀಲಿಸಲು ಅವುಗಳ ಅರ್ಥಶಾಸ್ತ್ರಾಧಾರಿತ ವರದಿಯನ್ನು ತಯಾರಿಸುವ ಸೂಚನೆಯನ್ನು ನೀತೀ ಆಯೋಗವು ‘ನೆಶನಲ್ ಕೌನ್ಸಿಲ್ ಆಫ್ ಅಪ್ಲೈಡ್ ಇಕಾನಾಮಿಕ ರಿಸರ್ಚ’ಗೆ (‘ಎನ್ಸಿಎಐಆರ್’ಗೆ) ನೀಡಿದೆ. ‘ನಾವು ಕೇವಲ ಗೋಶಾಲೆಗಳ ಅರ್ಥವ್ಯವಸ್ಥೆಯನ್ನು ಸುಧಾರಿಸುವ ಸಾಧ್ಯತೆಯನ್ನು ಪರೀಕ್ಷಿಸುತ್ತಿದ್ದೇವೆ. ಸೆಗಣಿಯ ಸಂಯುಕ್ತ ಉತ್ಪಾದನೆಗಳಿಗಾಗಿ ಏನು ಮಾಡಬಹುದು, ಎಂಬುದರ ಅಧ್ಯಯನ ನಡೆಯುತ್ತಿದೆ’, ಎಂಬ ಮಾಹಿತಿಯನ್ನು ನೀತೀ ಆಯೋಗದ ಸದಸ್ಯರಾದ ರಮೇಶ ಚಂದರವರು ನೀಡಿದ್ದಾರೆ. ಅಲೆದಾಡುವ ಹಸುಗಳಿಗೆ ಸಂಬಂಧಿಸಿದ ವಿವಿಧ ಪ್ರಶ್ನೆಗಳನ್ನು ಬಿಡಿಸಲು ನೀತೀ ಆಯೋಗವು ‘ಗೋಶಾಲೆಗಳ ಆರ್ಥಿಕವ್ಯವಸ್ಥೆ’ಯ ಮೇಲೆ ವಿಚಾರವಿನಿಮಯ ಮಾಡುತ್ತಿದೆ.
#NitiAayog working on #gaushala economy to address #straycattle issue, says its memberhttps://t.co/d8FFUpnoXG
— The Tribune (@thetribunechd) April 14, 2022
ರಮೇಶ ಚಂದರವರ ನೇತೃತ್ವದಲ್ಲಿನ ಅಧಿಕಾರಿಗಳ ಒಂದು ಗುಂಪು ಉತ್ತರಪ್ರದೇಶ, ರಾಜಸ್ಥಾನ ಮತ್ತು ದೇಶದ ಇತರ ಭಾಗಗಳಲ್ಲಿರುವ ದೊಡ್ಡ ಗೋಶಾಲೆಗಳ ಸದ್ಯದ ಸ್ಥಿತಿಯನ್ನು ಅವಲೋಕಿಸಿದೆ. ಅನಂತರ ಅವರು ಮೇಲಿನ ಮಾಹಿತಿಯನ್ನು ನೀಡಿದ್ದಾರೆ.
ರಮೇಶ ಚಂದರವರು ಮಾತನಾಡುತ್ತ, ಶೇ.೧೦ ರಿಂದ ೧೫ರಷ್ಟು ದನಗಳು ಬಹಳ ಕಡಿಮೆ ಹಾಲು ನೀಡುತ್ತವೆ. ಅದುದರಿಂದ ಕೆಲಸಗಾರರ ಖರ್ಚು, ಅವುಗಳ ಮೇವು ಮತ್ತು ಅವುಗಳ ಉಪಾಚಾರದ ಖರ್ಚು ನಿವರ್ಹಣೆ ಸಾಧ್ಯವಾಗುವುದಿಲ್ಲ. ಆದುದರಿಂದ ‘ಬಾಯೋ-ಸಿಎನ್ಜಿ’ ತಯಾರಿಸಲು ದನದ ಸೆಗಣಿಯನ್ನು ಬಳಸಬಹುದು. ಆದುದರಿಂದ ನಾವು ಇಂತಹ ಸಾಧ್ಯತೆಯ ಬಗ್ಗೆ ವಿಚಾರ ಮಾಡುತ್ತಿದ್ದೇವೆ’ ಎಂದು ಹೇಳಿದರು.
2024 ರಿಂದ ಮಹಾರಾಷ್ಟ್ರದಿಂದ 3 ಸಾವಿರದ 541 ಬಾಂಗ್ಲಾದೇಶಿ ನುಸುಳುಕೋರರ ಬಾಂಗ್ಲಾದೇಶಕ್ಕೆ ಗಡೀಪಾರು !
ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ಕೊಲಕಾತಾದ ‘ಸುಹ್ರಾವರ್ದಿ ರಸ್ತೆ’ಯ ಹೆಸರನ್ನು ‘ಗೋಪಾಲ್ ಮುಖರ್ಜಿ’ ಎಂದು ಬದಲಾಯಿಸಿದ ಸರಕಾರ : Gopal Mukherjee Road
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಹಿಂದೂ ಧರ್ಮದ ವಿಭಜನೆಗಾಗಿ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರ! – ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಭಾಜಪ