ರಾಷ್ಟ್ರಪತಿ ಸ್ಥಾನ ಬಿಟ್ಟುಕೊಡಲು ಗೊಟಬಯಾ ರಾಜಪಕ್ಷೆ ನಿರಾಕರಣೆ !

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾದಲ್ಲಿ ಪ್ರಸ್ತುತ ಆರ್ಥಿಕ ಬಿಕ್ಕಟಿನಿಂದ ಅರಾಜಕತೆ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ಗೋಟಬಯಾ ರಾಜಪಕ್ಷೆ ಇವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ವಿರೋಧ ಪಕ್ಷದ ಬೇಡಿಕೆ ತಳ್ಳಿಹಾಕಿದ್ದಾರೆ ಹಾಗೂ `ಸಂಸತ್ತಿನಲ್ಲಿ ಬಹುಮತ ಸಾಬೀತು ಪಡಿಸುವ ಪಕ್ಷಕ್ಕೆ ಅಧಿಕಾರ ಒಪ್ಪಿಸಲು ಸಿದ್ಧರಿದ್ದೇವೆ’, ಎಂದು ಅವರು ಹೇಳಿದರು. ಈ ಮೊದಲು ಮಂತ್ರಿ ಮಂಡಲದ ಎಲ್ಲ ಸಚಿವರು ರಾಜೀನಾಮೆ ನೀಡಿದ ನಂತರ ವಿರೋಧ ಪಕ್ಷದ ಸದಸ್ಯರನ್ನು ಸರಕಾರದಲ್ಲಿ ಸಹಭಾಗಿಯಾಗಲು ರಾಜಪಕ್ಷೆ ಕೇಳಿಕೊಂಡಿದ್ದರು. ಆದಕ್ಕೆ ವಿರೋಧ ಪಕ್ಷ ನಿರಾಕರಿಸಿತ್ತು.