ಬಿಹಾರದ ಹನುಮಾನ್ ಮಂದಿರದ ವೃದ್ಧ ಅಂಗವಿಕಲ ಪೂಜಾರಿಯ ಮೇಲೆ ಗುಂಡಿನ ದಾಳಿ

ಬಿಹಾರದಲ್ಲಿ ಯಾರ ರಾಜ್ಯ ಸರಕಾರದ್ದೊ ಅಥವಾ ಗೂಂಡಾಗಳದ್ದೊ ? -ಸಂಪಾದಕರು 

ಪಟನಾ (ಬಿಹಾರ) – ಬಿಹಾರದಲ್ಲಿ ಗೂಂಡಾಗಳ ಭಯೋತ್ಪಾದನೆ ಹೆಚ್ಚುತ್ತಿದೆ. ಇತ್ತಿಚಿನ ಘಟನೆಯೊಂದರಲ್ಲಿ ಬಿಹಾರದ ಬಕ್ಸರ್ ಜಿಲ್ಲೆಯ ದನಸೊಯಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಡವಾ ಗ್ರಾಮದ ಹನುಮಾನ ಮಂದಿರದ ವೃದ್ಧ ಅಂಗವಿಕಲ ಪೂಜಾರಿ ಕಾಶಿನಾಥ ಪಾಂಡೆಯವರ ಮೇಲೆ ದುಶ್ಕರ್ಮಿಗಳಿಂದ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಪೂಜಾರಿ ಮಂದಿರದ ಒಂದು ಕೊಠಡಿಯಲ್ಲಿ ಮಲಗಿದ್ದರು. ಅದೇ ವೇಳೆ ಆರೋಪಿಗಳು ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳಿದ ಗ್ರಾಮಸ್ಥರು ನಾಲ್ಕು ಕಡೆಯಿಂದ ಮಂದಿರದತ್ತ ಧಾವಿಸುತ್ತಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಪೂಜಾರಿಯನ್ನು ಅಸ್ಪತ್ರೆಗೆ ದಾಖಲಿಸಲಾಯಿತು.