ಇಬ್ಬರ ಮತಾಂಧರ ಬಂಧನ
ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಮತಾಂಧರು ಈ ರೀತಿಯ ಧೈರ್ಯ ಹೇಗೆ ತೋರುತ್ತಾರೆ, ಎಂದು ಹಿಂದುಗಳಲ್ಲಿ ಪ್ರಶ್ನೆ ನಿರ್ಮಾಣವಾಗುತ್ತದೆ !- ಸಂಪಾದಕರು

ಶಿವಮೊಗ್ಗ – ಗೋಪಾಲ ಬಡಾವಣೆಯಲ್ಲಿ ಪದ್ಮಾ ಚಿತ್ರ ಮಂದಿರದ ಹತ್ತಿರ ವೆಂಕಟೇಶ ಎಂಬ ವ್ಯಕ್ತಿಯ ಮೇಲೆ ದಾಳಿನಡೆಸಿದ ನಾಲ್ವರ ಮತಾಂಧರಲ್ಲಿ ಸಲ್ಮಾನ್ ಮತ್ತು ಸೈಯದ್ ಸುಬಾನ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ನಿಷೇಧಾಜ್ಞೆ ಇರುವಾಗಲೂ ಮುತಂಧರು ಈ ರೀತಿಯ ದಾಳಿ ಮಾಡಿದ್ದರಿಂದ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಫೆಬ್ರುವರಿ 20 ರಂದು ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆಯ ನಂತರ ಶಿವಮೊಗ್ಗ ಬೂದಿ ಮುಚ್ಚಿದ ಕೆಂಡದಂತಾಗಿದೆ. ಫೆಬ್ರುವರಿ 20 ರಿಂದ ಮಾರ್ಚ್ 4 ವರೆಗೂ ಜಿಲ್ಲಾಡಳಿತವು ನಿಷೇಧಾಜ್ಞೆ ಜಾರಿ ಮಾಡಿದೆ. ಜಿಲ್ಲೆಯಲ್ಲಿ ಕಠಿಣ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೀಗಿರುವಾಗಲೂ ಮಾರ್ಚ್ 4 ರಂದು ರಾತ್ರಿ ದಾಳಿ ನಡೆದಿದೆ. ಮತಾಂಧರು ಮತ್ತು ವೆಂಕಟೇಶ ಇವರಲ್ಲಿ ಕ್ಷುಲ್ಲಕ ಕಾರಣದಿಂದ ವಾಗ್ವಾದ ನಡೆದ ನಂತರ ಮತಾಂಧರು ವೆಂಕಟೇಶ ಇವರ ಮೇಲೆ ದಾಳಿ ನಡೆಸಿದ್ದಾರೆ. ಅದರಲ್ಲಿ ಗಾಯಗೊಂಡ ವೆಂಕಟೇಶ್ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಮಾಹಿತಿ ದೊರೆಯುತ್ತಲೇ, ಸಂಸದ ಬಿ.ವೈ. ರಾಘವೇಂದ್ರ ಇವರು ಆಸ್ಪತ್ರೆಗೆ ಹೋಗಿ ವೆಂಕಟೇಶ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
Shivamogga Voilence: ಶಿವಮೊಗ್ಗದಲ್ಲಿ ಹರ್ಷ ಹತ್ಯೆಯ ನಂತರ ನಿಷೇಧಾಜ್ಞೆ ನಡುವೆ ಗೋಪಾಲ ಎನ್ನುವರ ಮೇಲೆ ಮಾರಣಾಂತಿಕ ಆಕ್ರಮಣ ಮಾಡಿದ ಜಿಹಾದಿಗಳಾದ ಮಹಮ್ಮದ್ ಸಲ್ಮಾನ್, ಸೈಯದ್ ನನ್ನು ಶಿವಮೊಗ್ಗ ಪೋಲಿಸರು ಬಂಧನ ಮಾಡಿದ್ದಾರೆ.https://t.co/4G3YbMrI0f@astitvam@Girishvhp@IamAnitaBhat@PTI_Newshttps://t.co/ev2TPA44KM
— 🚩Mohan gowda🇮🇳 (@Mohan_HJS) March 5, 2022
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
US-Iran Ceasefire : ಇರಾನ್ ವ್ಯಾಪಾರಿ ನೌಕೆಯ ಮೇಲೆ ನಡೆಸಿದ ದಾಳಿಯ ನಂತರ ಇರಾನ್ನ ಮಿಲಿಟರಿ ನೆಲೆಗಳ ಮೇಲೆ ಅಮೆರಿಕಾದಿಂದ ದಾಳಿ
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!