* ಇದರೊಂದಿಗೆ ಹಿಂದುತ್ವನಿಷ್ಠರ ಕೊಲೆಗಾರರಿಗೆ ಗಲ್ಲುಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕಿದೆ !

ಬೆಂಗಳೂರು (ಕರ್ನಾಟಕ) – ಶಿವಮೊಗ್ಗದಲ್ಲಿ ಫೆಬ್ರುವರಿ ೨೦, ೨೦೨೨ ರಂದು ಹತ್ಯೆಯಾದ ಬಜರಂಗ ದಳದ ಕಾರ್ಯಕರ್ತನಾದ ಹರ್ಷರವರ ಸಂಬಂಧಿಕರಿಗೆ ಕರ್ನಾಟಕ ಸರಕಾರವು ೨೫ ಲಕ್ಷ ರೂಪಾಯಿಗಳ ಪರಿಹಾರ ನಿಧಿಯನ್ನು ನೀಡುವುದಾಗಿ ರಾಜ್ಯದ ಗ್ರಾಮವಿಕಾಸ ಮತ್ತು ಪಂಚಾಯತರಾಜ ಮಂತ್ರಿಗಳಾದ ಕೆ. ಎಸ್. ಈಶ್ವರಪ್ಪಾರವರು ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಾರವರು ಮಾರ್ಚ ೬ರಂದು ಹರ್ಷ ರವರ ಮನೆಗೆ ಹೋಗಿ ಈ ಹಣವನ್ನು ಅವರ ಸಂಬಂಧಿಕರಿಗೆ ಒಪ್ಪಿಸಲಿದ್ದಾರೆ. ಹರ್ಷನ ಕುಟುಂಬದವರಿಗೆ ಸಹಾಯ ಮಾಡುವ ದೃಷ್ಟಿಯಿಂದ ನಡೆಸಲಾದ ಒಂದು ಆನಲೈನ ಅಭಿಯಾನದಲ್ಲಿ ಹರ್ಷರವರ ತಾಯಿಯ ಖಾತೆಯಲ್ಲಿ ೬೦ ಲಕ್ಷಕ್ಕಿಂತಲೂ ಹೆಚ್ಚಿನ ಹಣ ಜಮೆಯಾಗಿದೆ.
CM has promised Rs 25 lakh compensation for Bajrang Dal worker Harsha’s kin: Karnataka minister https://t.co/GSsH4LK20Z
— TOI Cities (@TOICitiesNews) March 4, 2022
| ಇಲ್ಲಿಯ ವರೆಗೆ ೧೦ ಜನರ ಬಂಧನ
ಹರ್ಷರವರ ಹತ್ಯೆಯ ಪ್ರಕರಣದಲ್ಲಿ ಇಲ್ಲಿಯ ವರೆಗೆ ೧೦ ಜನರನ್ನು ಬಂಧಿಸಲಾಗಿದೆ. ‘ಈ ಪ್ರಕರಣದಲ್ಲಿ ತನಿಖಾದಳವು ಪ್ರಕರಣದ ಆಳವಾದ ತನಿಖೆಯನ್ನು ಮಾಡಲಿದ್ದು ಈ ಹತ್ಯೆಯ ಹಿಂದಿರುವ ಸಂಬಂಧಿತರನ್ನು ಹುಡುಕುತ್ತಿದೆ, ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಹೇಳಿದರು. |
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ