|

ಖಾರಕಿವ (ಯುಕ್ರೇನ್) – ಇಲ್ಲಿ ಭಾರತದ ನವೀನ ಶೇಖರಪ್ಪ ಈ ೨೧ ವರ್ಷದ ವಿದ್ಯಾರ್ಥಿ ರಷ್ಯಾದ ವಾಯುದಾಳಿಯಲ್ಲಿ ಸಾವನ್ನಪ್ಪಿದ್ದಾನೆ, ಎಂಬ ಮಾಹಿತಿ ರಾಷ್ಟ್ರೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿದೇಶಾಂಗ ಸಚಿವಾಲಯ ಈ ವಿದ್ಯಾರ್ಥಿಯ ಕುಟುಂಬದವರ ಸಂಪರ್ಕದಲ್ಲಿದ್ದಾರೆ. ನವೀನ ಇವನು ಕರ್ನಾಟಕದ ಚಳಗೇರಿ ಇಲ್ಲಿಯ ನಿವಾಸಿಯಾಗಿದ್ದು. ೨ ದಿನಗಳ ಹಿಂದೆ ಅವನು ‘ವಿಡಿಯೋ ಕಾಲ್’ ಮುಲಕ ಕುಟುಂಬದವರನ್ನು ಸಂಪರ್ಕಿಸಿದ್ದನು. ಖಾರಕಿವದಲ್ಲಿ ಅವನು ಶಿಬಿರದಲ್ಲಿ ವಾಸಿಸುತ್ತಿದ್ದನು. ಆಹಾರ ಪದಾರ್ಥ ಕೊಂಡುಕೊಳ್ಳಲು ಹೊರಗೆ ಬಂದಿರುವಾಗ ನಡೆದಿರುವ ಆಕ್ರಮಣದಲ್ಲಿ ಅವನು ಸಾವನ್ನಪ್ಪಿದನು. ಈ ಘಟನೆಯ ನಂತರ ಭಾರತದಲ್ಲಿನ ವಿದೇಶಾಂಗ ಸಚಿವಾಲಯ ಭಾರತದಲ್ಲಿ ಯುಕ್ರೇನ್ ಮತ್ತು ರಷ್ಯಾದ ರಾಯಭಾರಿಗಳಿಗೆ ಈ ವಿಷಯವಾಗಿ ವಿಚಾರಣೆ ನಡೆಸಿದ್ದಾರೆ ಹಾಗೂ ಭಾರತೀಯ ವಿದ್ಯಾರ್ಥಿಗಳಿಗೆ ಯುದ್ಧಗ್ರಸ್ಥ ನಗರಗಳಿಂದ ಹೊರ ಬರಲು ತಕ್ಷಣದಿಂದಲೇ ಸುರಕ್ಷಿತ ಮಾರ್ಗ ಒದಗಿಸಬೇಕೆಂದು, ಯುಕ್ರೇನ್ ಬಳಿ ಒತ್ತಾಯಿಸಿದೆ.
#Indian student killed in #Russian shelling in #Ukraine‘s #Kharkiv #NaveenShekharappa is a resident of #Karnatakahttps://t.co/pEdJsJDokz pic.twitter.com/3oNz4Om4DO
— The Tribune (@thetribunechd) March 1, 2022
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!
ಭಾರತೀಯರು ಜಗತ್ತಿನ ಅತ್ಯಂತ ಪ್ರತಿಭಾವಂತ ಜನರಲ್ಲಿ ಒಬ್ಬರಾಗಿದ್ದಾರೆ! – ವ್ಲಾದಿಮಿರ್ ಪುಟಿನ್, ಅಧ್ಯಕ್ಷರು, ರಷ್ಯಾ
ಇರಾನ್ನ ಕ್ಷಿಪಣಿ ಸಾಮರ್ಥ್ಯಕ್ಕೆ ಭಾರಿ ಪ್ರಮಾಣದ ಹಾನಿ! – ಡೊನಾಲ್ಡ್ ಟ್ರಂಪ್
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ