ಉಜ್ಜೈನ (ಮಧ್ಯಪ್ರದೇಶ) ದಲ್ಲಿ ಮತಾಂಧನಿಂದ ಹಿಂದೂ ತರುಣಿಯ ಮೇಲೆ ಚಾಕೂ ತೋರಿಸಿ ಬಲಾತ್ಕಾರ

ಇಂತಹವರಿಗೆ ಗಲ್ಲು ಶಿಕ್ಷೆಯಾಗಲು ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

( ಸಾಂಕೇತಿಕ ಛಾಯಾಚಿತ್ರ )

ಉಜ್ಜೈನ (ಮಧ್ಯಪ್ರದೇಶ) – ಇಲ್ಲಿ ಮಹಮ್ಮದ ಝೈದ ಎಂಬುವವನು ದೇವಸ್ಥಾನ ಅರ್ಚಕರ ಮಗಳ ಮೇಲೆ ಚಾಕೂ ತೋರಿಸಿ ಅತ್ಯಾಚಾರ ಮಾಡಿರುವ ಘಟನೆಯು ಬಹಿರಂಗವಾಗಿದೆ. ಈ ಹಿಂದೆ ಝೈದನು ಈ ಹುಡುಗಿಯನ್ನು ಚುಡಾಯಿಸಿದ್ದರಿಂದ ಅವನ ವಿರುದ್ಧ ದೂರನ್ನು ನೋಂದಾಯಿಸಲಾಗಿತ್ತು. ಅನಂತರ ಝೈದನನ್ನು ಬಂಧಿಸಲಾಗಿತ್ತು. ಅವನು ಬಂಧನದ ಸೇಡು ತೀರಿಸಿಕೊಳ್ಳಲು ಆ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದನು. ಈ ಪ್ರಕರಣದಲ್ಲಿ ಪೊಲೀಸರು ಝೈದನನ್ನು ಬಂಧಿಸಿದ್ದಾರೆ. ಈ ಹುಡುಗಿಯು ಮಹಾವಿದ್ಯಾಲಯಕ್ಕೆ ಹೋಗಲು ಮನೆಯಿಂದ ಹೊರಟಿದ್ದಳು. ಆಗ ಝೈದನು ಆಕೆಗೆ ಚಾಕೂ ತೋರಿಸಿ ಒಂದು ಅಥಿತಿಗೃಹಕ್ಕೆ ಒಯ್ದು ಆಕೆಯ ಮೇಲೆ ಬಲಾತ್ಕಾರ ಮಾಡಿದನು.

ಈ ಘಟನೆಯ ಮಾಹಿತಿ ದೊರೆಯುತ್ತಲೇ ಸ್ಥಳೀಯ ಹಿಂದುತ್ವನಿಷ್ಠರು ಪೊಲೀಸ ಠಾಣೆಯ ಹೊರಗೆ ಆಂದೋಲನ ಮಾಡಿದರು. ಹಾಗೆಯೇ ಇದು ‘ಲವ್‌ ಜಿಹಾದಿ’ನ ಪ್ರಕರಣವಾಗಿದ್ದು ಆರೋಪಿಯ ಮೇಲೆ ಕಠೋರ ಕಾರ್ಯಾಚರಣೆ ಮಾಡುವ ಬಗ್ಗೆ ಮನವಿ ಮಾಡಿದರು. ಪೊಲೀಸರಿಗೆ ಝೈದ ಮೊಬೈಲಿನಲ್ಲಿ ಅನೇಕ ಹುಡುಗಿಯರ ಕ್ರಮಾಂಕ ಮತ್ತು ಮಾಹಿತಿ ದೊರೆಯಿತು, ಹಾಗೆಯೇ ಅಶ್ಲೀಲ ಚಿತ್ರಗಳೂ ದೊರೆತಿವೆ.