ಸೂಚನೆ ಕೇಳಲು ಸಂಕೇತಸ್ಥಳವನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾರವರ ಘೋಷಣೆ
ಆಸಾಮ ಸರಕಾರದ ಅಭಿನಂದನಾರ್ಹ ನಿರ್ಣಯ ! ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರ ಸರಕಾರವೂ ಈ ದೃಷ್ಟಿಯಿಂದ ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಗೌಹಾತ್ತಿ (ಆಸಾಮ) – ಹೆಸರಿನಲ್ಲಿ ಬಹಳ ಸಂಗತಿಗಳು ಇರುತ್ತವೆ. ಪ್ರತಿಯೊಂದು ನಗರ, ಶಹರ ಮತ್ತು ಊರುಗಳ ಹೆಸರು, ಅವುಗಳ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸಬೇಕು. ನಾವು ಸಂಪೂರ್ಣ ಆಸಾಮ ರಾಜ್ಯದಲ್ಲಿ ಇಂತಹ ಜಾಗಗಳ ಹೆಸರುಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಸೂಚನೆ ನೀಡಲು ಒಂದು ಸಂಕೇತಸ್ಥಳವನ್ನು ಆರಂಭಿಸುತ್ತಿದ್ದೇವೆ. ಈ ಮೂಲಕ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ವಿರುದ್ಧ ಇರುವ ಅಥವಾ ಜಾತಿ ಮತ್ತು ಸಮಾಜಕ್ಕೆ ಅಪಮಾನ ಮಾಡುವ ಹೆಸರುಗಳನ್ನು ಬದಲಾಯಿಸಲಾಗುವುದು, ಎಂದು ಆಸಾಮಿನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾರವರು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಅವರು ರಾಜ್ಯದಲ್ಲಿನ ವಿವಿಧ ಕಡೆಗಳಲ್ಲಿನ ಹೆಸರು ಬದಲಾಯಿಸಲಾಗುವುದು ಎಂದು ಘೋಷಿಸಿದರು.
THERE’S MUCH IN A NAME
Name of a city, town or village should represent its culture, tradition & civilisation.
We shall launch a portal to invite suggestions on change of names across Assam which are contrary to our civilisation, culture & derogatory to any caste or community.
— Himanta Biswa Sarma (@himantabiswa) February 16, 2022
ಈ ಹಿಂದೆಯೂ ಸರಮಾರವರು ಈ ವಿಷಯದಲ್ಲಿ ಹೇಳಿಕೆ ನೀಡಿದ್ದರು. ಆಗ ‘ಕಾಲಾಪಹಾಡ’ನ ಉದಾಹರಣೆಯನ್ನು ನೀಡಿದ್ದರು. ಕಾಲಾಪಹಾಡ ಓರ್ವ ಮತಾಂಧ ಶಾಸಕನಾಗಿದ್ದನು. ‘ಕಾಲಾಪಹಾಡನು ಪ್ರಸಿದ್ಧ ಕಾಮಾಕ್ಯ ದೇವಸ್ಥಾನ ವನ್ನು ಧ್ವಂಸಗೊಳಿಸಿದ್ದನು. ಆದುದರಿಂದ ಯಾವುದೇ ಜಾಗದ ಹೆಸರು ಕಾಲಾಪಹಾಡ ಎಂದು ಇರಲು ಸಾಧ್ಯವಿಲ್ಲ. ಜನರು ಸೂಚಿಸಿದ ನಂತರ ಈ ಹೆಸರನ್ನು ಬದಲಾಯಿಸಲಾಗುವುದು, ಎಂದು ಅವರು ಹೇಳಿದ್ದರು.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!