‘ಹಿಜಾಬ್ ಅನ್ನು ಧರಿಸದಿರುವುದರಿಂದಲೇ ಜಗತ್ತಿನಲ್ಲಿನ ಅತ್ಯಂತ ಹೆಚ್ಚು ಬಲಾತ್ಕಾರಗಳು ಭಾರತದಲ್ಲಿ ಆಗುತ್ತವೆ !’ – ಕಾಂಗ್ರೆಸ್ ನೇತಾರ ಜಮೀರ ಅಹಮದ

  • ಹಿಜಾಬಿನ ಸಮರ್ಥನೆಗಾಗಿ ಅರಳಿಮರದ ಸಿಪ್ಪೆಯನ್ನು ಆಲದ ಮರಕ್ಕೆ ಹಚ್ಚುವ ಕಾಂಗ್ರೆಸ್ಸಿನ ಮತಾಂಧ ನೇತಾರರ ಪ್ರಯತ್ನಗಳನ್ನು ಅರಿಯಿರಿ !
  • ಅನೇಕ ಮುಸಲ್ಮಾನ ಮಹಿಳೆಯರು, ನೇತಾರರು, ನಟಿಯರು ಹಾಗೂ ಕ್ರೀಡಾಪಟುಗಳು ಹಿಜಾಬನ್ನು ಧರಿಸುವುದಿಲ್ಲ, ಈ ಬಗ್ಗೆ ಅಹಮದರವರು ಏಕೆ ಏನೂ ಹೇಳುವುದಿಲ್ಲ ?
  • ಹಿಂದೂ ನೇತಾರರು ‘ಹುಡುಗಿಯರು ತುಂಡುಡುಗೆಗಳನ್ನು ಧರಿಸುವುದರಿಂದಲೇ ಅವರ ಮೇಲೆ ಬಲಾತ್ಕಾರಗಳಾಗುತ್ತವೆ’, ಎಂಬು ಹೇಳಿಕೆಯನ್ನು ನೀಡಿದಾಗ ಅವರಿಗೆ ಹಿಂದುಳಿದ ವಿಚಾರದವರು ಎಂದು ಹೇಳಿ ಅವರ ಮೇಲೆ ದಾಳಿ ಮಾಡುವ ಪುರೋ(ಅಧೋ)ಗಾಮಿ, ಕಾಂಗ್ರೆಸ್ಸಿನವರು, ಹಿಂದೂದ್ವೇಷಿ ಪ್ರಸಾರಮಾಧ್ಯಮ ಇತ್ಯಾದಿಗಳು ಇಂತಹ ಸಮಯದಲ್ಲಿ ಯಾವ ಬಿಲದಲ್ಲಿ ಅಡಗಿ ಕುಳಿತಿವೆ ? ಹಿಂದೂಗಳು ಮೈತುಂಬ ಬಟ್ಟೆಗಳನ್ನು ಧರಿಸುವ ಬಗ್ಗೆ ಹೇಳಿಕೆ ನೀಡಿದರೆ ಅದನ್ನು ವಿರೋಧಿಸುವುದು ಮತ್ತು ಇತರ ಪಂಥದ ನೇತಾರರು ಮೈತುಂಬ ಬಟ್ಟೆಗಳನ್ನು ಧರಿಸುವ ಬಗ್ಗೆ ಹೇಳಿದಾಗ ಅದನ್ನು ಸಮರ್ಥಿಸುವುದು ಈ ಮಂಡಳಿಯ ಅವಕಾಶವಾದವಾಗಿದೆ !
  • ದೇವಸ್ಥಾನಗಳಲ್ಲಿನ ಪ್ರವೇಶದ ಸಂದರ್ಭದಲ್ಲಿ ಮಹಿಳೆಯರ ಅಧಿಕಾರಗಳ ಬಗ್ಗೆ ನೆನಪಾಗುವ ತೃಪ್ತಿ ದೇಸಾಯಿ ಹಿಜಾಬಿನ ಪ್ರಕರಣದಲ್ಲಿ ಏಕೆ ಮಾತನಾಡುತ್ತಿಲ್ಲ ?

ಬೆಂಗಳೂರು (ಕರ್ನಾಟಕ) – ‘ಇಸ್ಲಾಮಿನಲ್ಲಿ ಹಿಜಾಬ ಅಂದರೆ ಪರದೆ. ವಯಸ್ಸಿಗೆ ಬಂದನಂತರ ಹುಡುಗಿಯರು ಹಿಜಾಬ ಧರಿಸಿ ತಮ್ಮ ಸೌಂದರ್ಯವನ್ನು ಅಡಗಿಸಿಡಬೇಕು. ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಬಲಾತ್ಕಾರಗಳು ಭಾರತದಲ್ಲಿ ನಡೆಯುತ್ತವೆ. ಇದರ ಕಾರಣವೇನು ? ಆ ಮಹಿಳೆಯು ತನ್ನ ಮುಖವನ್ನು ಅಡಗಿಸುವುದಿಲ್ಲ’, ಎಂಬ ಹೇಳಿಕೆಯನ್ನು ಕರ್ನಾಟಕದಲ್ಲಿನ ಕಾಂಗ್ರೆಸ್ ನೇತಾರರಾದ ಜಮೀರ ಅಹಮದರವರು ನೀಡಿದ್ದಾರೆ. ಕೇರಳದ ರಾಜ್ಯಪಾಲರಾದ ಆರೀಫ ಮಹಮ್ಮದ ಖಾನರವರು ‘ಹಿಜಾಬನ್ನು ಧರಿಸುವ ಬಗ್ಗೆ ಕುರಾನಿನಲ್ಲಿ ಉಲ್ಲೇಖವಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಸಂದರ್ಭದಲ್ಲಿ ಜಮೀರರವರು ಮಾತನಾಡುತ್ತಿದ್ದರು. (ಜಮೀರರವರು ಖಾನರವರಿಗೆ ಪ್ರತ್ಯುತ್ತರ ನೀಡಲೇ ಬೇಕಾಗಿದ್ದರೆ ಅವರು ಕುರಾನಿನ ಆಧಾರ ನೀಡಬೇಕು; ಆದರೆ ಖಾನರವರು ಜಮೀರ ಹಾಗೂ ಇತರ ಮತಾಂಧರ ಹೇಳಿಕೆಗಳನ್ನು ಪುರಾವೆಯೊಂದಿಗೆ ನಿರಾಕರಿಸಿದ್ದರಿಂದ ಅವರಿಗೆ ಏನೂ ಹೊಳೆಯದಂತಾಗಿದೆ ಮತ್ತು ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದನ್ನು ಗಮನದಲ್ಲಿಡಿ ! ? ಸಂಪಾದಕರು)