ಹಿಜಾಬಿನ ವಿಷಯದಲ್ಲಿ ಭಾರತದಲ್ಲಿ ಜನಮತ ತೆಗೆದುಕೊಳ್ಳಲು ಪಾಕಿಸ್ತಾನದಿಂದ ‘ಶೀಖ ಫಾರ ಜಸ್ಟಿಸ್’ ಎಂಬ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಬಳಕೆ

ಹಿಜಾಬಿನ ವಿಷಯದಿಂದ ಭಾರತದಲ್ಲಿ ಅರಾಜಕತೆಯನ್ನು ಪಸರಿಸುವ ಪಾಕಿಸ್ತಾನದ ಹುನ್ನಾರ

* ದೊರೆತಿರುವ ಅವಕಾಶವನ್ನು ಸಾಧಿಸಿ ಪಾಕಿಸ್ತಾನವು ಭಾರತವನ್ನು ಅಸ್ಥಿರಗೊಳಿಸುತ್ತದೆ, ಆದರೆ ಇಂತಹ ಪಾಕಿಸ್ತಾನಕ್ಕೆ ಬುದ್ಧಿಕಲಿಸುವುದನ್ನು ಬಿಟ್ಟು ಭಾರತವು ಪಾಕಿಸ್ತಾನಕ್ಕೆ ಕೇವಲ ಎಚ್ಚರಿಕೆ ನೀಡುತ್ತದೆ ! ಆದುದರಿಂದ ಸರಕಾರವು ಈಗಲಾದರೂ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂಬ ಅಪೇಕ್ಷೆಯಿದೆ !- ಸಂಪಾದಕರು 

* ‘ಶತ್ರುಗಳೊಂದಿಗೆ ಹೇಗೆ ವರ್ತಿಸಬೇಕು ?’ ಎಂಬುದು ಪಾಕಿಸ್ತಾನದ ಕೃತಿಗಳಿಂದ ಕಂಡುಬರುತ್ತದೆ, ಆದರೆ ಶತ್ರುಗಳೊಂದಿಗೆ ಹೇಗೆ ವರ್ತಿಸಬಾರದು ?’ ಎಂಬುದು ಭಾರತದ ಕೃತಿಗಳಿಂದ ಕಂಡುಬರುತ್ತದೆ ! -ಸಂಪಾದಕರು 

(ಎಡದಲ್ಲಿ) ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಪ್ರಮುಖ ಗುರಪತವಂತ ಸಿಂಗ ಪನ್ನು

ನವದೆಹಲಿ – ದೇಶದಲ್ಲಿ ಸದ್ಯದಲ್ಲಿ ಹಿಜಾಬಿನ ವಿಷಯದಲ್ಲಿ ವಾದ ನಡೆಯುತ್ತಿರುವಾಗ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯಾದ ಐ. ಎಸ್‌. ಐಯು ಖಲಿಸ್ತಾನಿ ಭಯೋತ್ಪಾದ ಸಂಘಟನೆಯ ಮಾಧ್ಯಮದಿಂದ ಭಾರತದಲ್ಲಿ ಅರಾಜಕತೆಯನ್ನು ಪಸರಿಸುವ ಹುನ್ನಾರ ನಡೆಸುತ್ತಿದೆ. ‘ಶೀಖ ಫಾರ ಜಸ್ಟಿಸ್’ ಎಂಬ ನಿರ್ಬಂಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಪ್ರಮುಖನಾದ ಗುರಪತವಂತ ಸಿಂಗ ಪನ್ನು ಎಂಬುವವನು ಈ ವಿಷಯದಲ್ಲಿ ಒಂದು ವಿಡಿಯೋ ಪ್ರಸಾರ ಮಾಡಿದ್ದಾನೆ. ಆದುದರಿಂದ ಭಾರತೀಯ ಗುಪ್ತಚರ ವಿಭಾಗವು ಸತಕರ್ತೆಯಿಂದಿರಲು ಹೇಳಿದೆ. ‘ಶೀಖ ಫಾರ ಜಸ್ಟಿಸ್’ನ ವಿಡಿಯೋದಲ್ಲಿ ಪನ್ನುವು ಭಾರತೀಯ ಮುಸಲ್ಮಾನರಿಗೆ ಹಿಜಾಬಿಗಾಗಿ ಜನಮತಗಳಿಸಲು ಮತ್ತು ಭಾರತವನ್ನು ‘ಉರ್ದುಸ್ತಾನ’ವಾಗಿಸುವ ದಿಶೆಯಲ್ಲಿ ಕಾರ‍್ಯಾಚರಣೆ ಮಾಡಲು ಆಹ್ವಾನ ನೀಡಿದೆ. ಇದಕ್ಕಾಗಿ ಒಂದು ಸಂಕೇತಸ್ಥಳವನ್ನು ತಯಾರಿಸಲಾಗಿದೆ.