ಕರ್ನಾಟಕದಲ್ಲಿ ಕೇಸರಿ ಶಾಲು ಧರಿಸಿದ್ದರಿಂದ ಮತಾಂಧ ವಿದ್ಯಾರ್ಥಿಗಳಿಂದ ಥಳಿಕ್ಕೊಳಗಾಗಿದ್ದರಿಂದ ವಿದ್ಯಾರ್ಥಿಯಿಂದ ಆತ್ಮಹತ್ಯೆಯ ಪ್ರಯತ್ನ

ಇದಕ್ಕೆ ಕಾರಣಕರ್ತರಾಗಿರುವವರ ವಿರುದ್ಧ ರಾಜ್ಯದ ಭಾಜಪ ಸರಕಾರವು ಕಠಿಣ ಕ್ರಮಕೈಗೊಂಡು ಅವರಿಗೆ ಕಠಿಣ ಶಿಕ್ಷೆಯಾಗಲು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

ಆಂಟನಿ ಪ್ರಜ್ವಲ್

ಮಡಿಕೇರಿ – ಕೊಡಗು ಜಿಲ್ಲೆಯ ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್‍ನಲ್ಲಿ ಪ್ರಥಮ ವರ್ಷದಲ್ಲಿ ಓದುವ ವಿದ್ಯಾರ್ಥಿ ಆಂಟನಿ ಪ್ರಜ್ವಲ್ (ವಯಸ್ಸು 18) ಈ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಹಿಜಾಬ್‍ನ ಬೇಡಿಕೆಯ ವಿರೋಧ ವ್ಯಕ್ತಪಡಿಸಲು ಆಂಟನಿಯು ಕೇಸರಿ ಶಾಲು ಧರಿಸಿದ್ದರಿಂದ ಅವನನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿಗೃಹದಲ್ಲಿ ಇತರ ವಿದ್ಯಾರ್ಥಿಗಳು ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಅವನು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ. ತಾನಾಗಿಯೇ ಈ ಮಾಹಿತಿಯನ್ನು ತನ್ನ ಸ್ನೇಹಿತರಿಗೆ ದೂರವಾಣಿಯ ಮೂಲಕ ತಿಳಿಸಿದನಂತರ ಸ್ನೇಹಿತರು ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಕುಶಾಲನಗರ ಪೊಲೀಸರು ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ.