‘ಜಯ ಶ್ರೀರಾಮ’ ಘೋಷಣೆ ನೀಡುವ ಹಿಂದು ವಿಧ್ಯಾರ್ಥಿಗಳನ್ನು ‘ಅಲ್ಲಾ ಹೂ ಅಕಬರ’ ಎಂದು ವಿರೋಧಿಸಿದ ಮುಸಲ್ಮಾನ ವಿಧ್ಯಾರ್ಥಿನಿಗೆ ೫ ಲಕ್ಷ ರೂಪಾಯಿಗಳ ಬಹುಮಾನ

‘ಜಮಿಯತ ಉಲೇಮಾ-ಎ-ಹಿಂದ’ ಸಂಸ್ಥೆಯ ಘೋಷಣೆ

  • ಒಂದು ವೇಳೆ ಅದೇ ಸ್ಥಳದಲ್ಲಿ ಹಿಂದು ವಿಧ್ಯಾರ್ಥಿನಿ ಇರುತ್ತಿದ್ದರೆ ಹಾಗೂ ಮತಾಂಧ ವಿಧ್ಯಾರ್ಥಿಗಳಿದ್ದಿದ್ದರೆ, ಆಗ ಅವರು ಆ ಹಿಂದು ಹುಡುಗಿಯ ಸ್ಥಿತಿ ಏನು ಮಾಡುತ್ತಿದ್ದರು, ಎಂಬುದನ್ನು ಹೇಳುವುದು ಅಗತ್ಯವಿಲ್ಲ ! ವಿದ್ಯಾರ್ಥಿಗಳು ಹಿಂದೂಗಳಾಗಿದ್ದರಿಂದ ಅವರು ಕಾನೂನು ಬದ್ಧವಾಗಿ ಪ್ರತಿಭಟನೆ ಮಾಡಿದರು, ಈ ಬಗ್ಗೆ ಪ್ರಗತಿ(ಅಧೋ) ಪರರು ಉದ್ದೇಶ ಪೂರ್ವಕವಾಗಿ ನಿರ್ಲಕ್ಷ ಮಾಡುತ್ತಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !
  • ಮುಂಬಯಿನ ಆಝಾದ ಮೈದಾನದಲ್ಲಿ ರಝಾ ಅಕಾಡಮಿಯು ನಡೆಸಿದ್ದ ಗಲಭೆಯಲ್ಲಿ ಹಿಂದೂ ಮಹಿಳಾ ಪೋಲೀಸರ ಅತ್ಯಾಚಾರ ಮಾಡುವ ಮತಾಂಧರ ವಿಷಯದಲ್ಲಿ ಜಾತ್ಯತೀತರು ಹಾಗೂ ಪ್ರಗತಿ(ಅಧೋ)ಪರರು ಎಂದಿಗೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !
  • ‘ಲವ್ ಜಿಹಾದ’ನ ಮೂಲಕ ಹಿಂದೂ ವಿಧ್ಯಾರ್ಥಿನಿಯರ ಜೀವನವನ್ನೇ ಧ್ವಂಸ ಮಾಡುವ ಮತಾಂಧರ ವಿಷಯದಲ್ಲಿ ತಥಾಕಥಿತ ಜಾತ್ಯತೀತರು ಹಾಗೂ ಮಹಿಳಾ ಸ್ವಾತಂತ್ರ್ಯದ ಬಗ್ಗೆ ಕೂಗಾಡುವವರು ಏಕೆ ಮಾತನಾಡುವುದಿಲ್ಲ ?
  • ಮುಸಲ್ಮಾನ ವಿಧ್ಯಾರ್ಥಿನಿಯರು ಹಿಜಾಬನ ಬೇಡಿಕೆ ಮಾಡಿರುವಾಗ ಅವರು ಬುರ್ಖಾ ತೊಟ್ಟು ಮಹಾವಿದ್ಯಾಲಯಗಳಿಗೆ ಹೇಗೆ ಬರುತ್ತಿದ್ದಾರೆ ? ಎಂಬ ವಿಷಯದಲ್ಲಿ ಯಾರೂ ಏಕೆ ಮಾತನಾಡುವುದಿಲ್ಲ ?

ಬೆಂಗಳೂರು – ಕರ್ನಾಟಕದ ಮಂಡ್ಯಾ ಜಿಲ್ಲೆಯಲ್ಲಿ ಮ. ಗಾಂಧಿ ಮಹಾವಿಧ್ಯಾಲಯದೊಳಗೆ ಹಿಜಾಬ ಧರಿಸಿ ಪ್ರವೇಶಿಸುವ ಬಗ್ಗೆ ಆಂದೋಲನ ನಡೆಯುತ್ತಿದೆ. ಹಿಂದೂ ವಿದ್ಯಾರ್ಥಿನಿಯರು ಕೂಡ ಕೇಸರೀ ಶಾಲು ಧರಿಸಿ ಪ್ರವೇಶಿಸುವ ಬೇಡಿಕೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಫೆಬ್ರುವರಿ ೮ ರಂದು ಕೇಸರಿ ಶಾಲು ಧರಿಸಿ ದೊಡ್ಡ ಸಂಖ್ಯೆಯಲ್ಲಿ ಹಿಂದೂ ವಿದ್ಯಾರ್ಥಿಗಳು ‘ಜಯ ಶ್ರೀರಾಮ’ ಎಂದು ಹೇಳುತ್ತಾ ಬುರಖಾ ಧರಿಸಿಕೊಂಡ ಬಂದ ಓರ್ವ ವಿಧ್ಯಾರ್ಥಿನಿಯನ್ನು ಕಾನೂನುಬದ್ಧ ಮಾರ್ಗದಲ್ಲಿ ವಿರೋಧಿಸಿದರು.

ಆಗ ಒಂಟಿಯಾಗಿ ವಿದ್ಯಾರ್ಥಿನಿಯು ಅವರನ್ನು ‘ಅಲ್ಲಾ ಹೂ ಅಕಬರ’ (ಅಲ್ಲಾ ಮಹಾನ ಆಗಿದ್ದಾನೆ) ಎಂದು ಹೇಳಿ ವಿರೋಧಿಸಿದಳು. ಅವಳ ಈ ಧೈರ್ಯದಿಂದ ‘ಜಮಿಯತ ಉಲೆಮಾ-ಎ-ಹಿಂದ’ ಸಂಸ್ಥೆಯಿಂದ ಅವಳಿಗೆ ೫ ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದೆ.

ಈ ವಿದ್ಯಾರ್ಥಿನಿಯ ಹೆಸರು ಮುಸ್ಕಾನ ಖಾನ ಎಂದಾಗಿದೆ. ಅವಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಈ ಬಹುಮಾನ ನೀಡುತ್ತಿರುವುದಾಗಿ ಈ ಸಂಘಟನೆಯು ಹೇಳಿದೆ.