#YesToUniform_NoToHijab
ಭೋಪಾಲ (ಮಧ್ಯಪ್ರದೇಶ), ಫೆಬ್ರುವರಿ ೮ (ವಾರ್ತೆ.) – ಶಾಲೆ, ಪೋಲಿಸ ದಳ, ಸೈನ್ಯದಳ ಮತ್ತು ಅರೇ ಸೇನಾ ಪಡೆ ಇದರಲ್ಲಿ ಶಿಸ್ತು ಮಹತ್ವದ್ದಾಗಿರುತ್ತದೆ. ಅದರ ಪ್ರಮಾಣಿತ ಸಮವಸ್ತ್ರ ಇದು ಒಂದು ಶಿಸ್ತಿನ ಭಾಗವೇ ಆಗಿದೆ. ಮತ್ತು ಅದರ ಪಾವಿತ್ರ್ಯ ಜೋಪಾನ ಮಾಡಬೇಕು.
ಯಾರದಾದರೂ ವೈಯಕ್ತಿಕ, ಸಾಮಾಜಿಕ ಅಥವಾ ಧಾರ್ಮಿಕ ಜೀವನದಲ್ಲಿ ಅವರ ಉಡುಗೆ ತೊಡಿಗೆಯ ಬಗ್ಗೆ ಸರಕಾರಕ್ಕೆ ಏನು ಹೇಳುವಂತದ್ದು ಇಲ್ಲ; ಆದರೆ ಶೈಕ್ಷಣಿಕ ಮತ್ತು ಸರಕಾರಿ ಸಂಸ್ಥೆಗಳು ಜಾತ್ಯತೀತ ಕ್ಷೇತ್ರಗಳಾಗಿವೆ ಮತ್ತು ಅಲ್ಲಿ ನಿಯಮಗಳ ಪಾಲನೆ ಮಾಡುವಾಗ ಅಧಾರ್ಮಿಕ ವೃತ್ತಿಯೊಂದಿಗೆ ರಾಜೀ ಮಾಡಿಕೊಳ್ಳುವುದು ಅಯೋಗ್ಯವಾಗಿದೆ. ಎಂದು ಭೋಪಾಲದ ಖ್ಯಾತ ‘ಮಾಖನಲಾಲ ಚತುರ್ವೆದಿ ರಾಷ್ಟ್ರೀಯ ವಿಶ್ವವಿದ್ಯಾಲಯ’ದ ಕುಲಗುರು ಪ್ರಾ. ಕೆ.ಜಿ. ಸುರೇಶ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.
‘ಸನಾತನ ಪ್ರಭಾತ’ ನಿಯತಕಾಲಿಕೆಯ ಪ್ರತಿನಿಧಿಯು ಅವರನ್ನು ಭೇಟಿ ಮಾಡಿದಾಗ ಅವರು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು. ಉಡುಪಿಯ ಶಾಲೆಯಲ್ಲಿ ವಿದ್ಯಾರ್ಥಿನಿಯರು ‘ಹಿಜಾಬ್’ ಹಾಕಿಕೊಂಡು ಬಂದಿದ್ದರಿಂದ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ವಿಷಯವಾಗಿ ಮಾತನಾಡುವಾಗ ಕೆ.ಜಿ. ಸುರೇಶ ಇವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ