ಭೋಜ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆವತಿಯಿಂದ ಕಾರ್ಯಕ್ರಮಗಳ ಆಯೋಜನೆ

ಧಾರ(ಮಧ್ಯಪ್ರದೇಶ) – ವಸಂತ ಪಂಚಮಿಯ ನಿಮಿತ್ತದಿಂದ ಭೋಜ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆಯ ವತಿಯಿಂದ ಭೋಜಶಾಲಾದಲ್ಲಿ ಫೆಬ್ರುವರಿ 5 ರಿಂದ ಆರಂಭವಾದ ಕಾರ್ಯಕ್ರಮ ಫೆಬ್ರುವರಿ 8 ರ ವರೆಗೆ ಜರುಗಲಿದೆ. ಕಾರ್ಯಕ್ರಮದ ಸ್ಥಳದಲ್ಲಿ ಜಿಲ್ಲಾಡಳಿತದಿಂದ ಬೃಹತ್ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ, ಎಂದು ಸ್ಥಳೀಯ ಜಿಲ್ಲಾ ದಂಡಾಧಿಕಾರಿಗಳ ಕಚೇರಿಯಿಂದ ಮಾಹಿತಿಯನ್ನು ಪ್ರಕಟಿಸಿದೆ.
#Dhar: Devotees throng Bhojshala as four-day Basant Panchami festival beginshttps://t.co/fqWyD4txNv
— Free Press Journal (@fpjindia) February 5, 2022
ವಸಂತ ಪಂಚಮಿಯ ನಿಮಿತ್ತ ಭೋಜಶಾಲಾದಲ್ಲಿ ಶ್ರೀ ಸರಸ್ವತಿದೇವಿಯ ಜನ್ಮೋತ್ಸವವನ್ನು ಉತ್ಸಾಹದಲ್ಲಿ ಆಚರಿಸಲಾಗುತ್ತದೆ. ಈ ನಿಮಿತ್ತ ಭೋಜ ಉತ್ಸವ ಸಮಿತಿಯ ವತಿಯಿಂದ ಸಂರಕ್ಷಿಸಲ್ಪಟ್ಟ ಸ್ಮಾರಕ ಭೋಜಶಾಲಾ ಮತ್ತು ಮೋತಿಬಾಗ ಚೌಕದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
6 ಫೆಬ್ರುವರಿ : ಈ ದಿನದಂದು ಮಧ್ಯಾಹ್ನ 2 ಗಂಟೆ 30 ನಿಮಿಷದಿಂದ ಭೋಜಶಾಲಾದಲ್ಲಿ ಮಾತೃಶಕ್ತಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ರಾತ್ರಿ 8 ಗಂಟೆಗೆ ಮೋತಿಬಾಗ ಚೌಕದಲ್ಲಿ ಶ್ರೀ ಬಾಬಾ ಖಾಟುಶ್ಯಾಮಜಿಯವರ `ಭಜನ ಸಂಧ್ಯಾ’ ಇಡಲಾಗಿದೆ.
7 ಫೆಬ್ರುವರಿ : ಈ ದಿನದಂದು ಮಧ್ಯಾಹ್ನ 1 ಗಂಟೆಗೆ ಸಂವಾದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ತದನಂತರ ರಾತ್ರಿ 9 ಗಂಟೆಗೆ ಮೋತಿಬಾಗ ಚೌಕದಲ್ಲಿ `ಅಖಿಲ ಭಾರತೀಯ ವಿರಾಟ ಕವಿ ಸಮ್ಮೇಳನ’ ಜರುಗಲಿದೆ.
8 ಫೆಬ್ರುವರಿ : ಈ ದಿನದಂದು ಬೆಳಿಗ್ಗೆ 8 ಗಂಟೆ 55 ನಿಮಿಷಕ್ಕೆ ಭೋಜಶಾಲಾದಲ್ಲಿ ನಿಯಮಿತ ಸತ್ಯಾಗ್ರಹ ಜರುಗಲಿದೆ ಮತ್ತು ತದನಂತರ ಬೆಳಿಗ್ಗೆ 10 ಗಂಟೆಗೆ ಅಖಂಡ ಸಂಕಲ್ಪ ಜ್ಯೋತಿ ಮಂದಿರದಲ್ಲಿ ಕನ್ಯಾಪೂಜೆ ಮತ್ತು ಕನ್ಯಾಭೋಜನ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!