ಉಡುಪಿಯ ಸರಕಾರಿ ವಿಶ್ವವಿದ್ಯಾಲಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ ಧರಿಸಲು ಮನವಿ ಮಾಡಿರುವದರಿಂದ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿದರು !

ಶಾಲೆ, ವಿಶ್ವವಿದ್ಯಾಲಯಗಳ ಸಮವಸ್ತ್ರವಿರುವಾಗ ಅದನ್ನು ನಿರಾಕರಿಸಿ ಧಾರ್ಮಿಕ ವೇಶಭೂಷಣವನ್ನು ಧರಿಸಲು ಮತಾಂದರ ಬೇಡಿಕೆ ನಿಯಮಬಾಹಿರವಾಗಿದೆ. ಅದಕ್ಕೆ ಒಂದು ವೇಳೆ ಹಿಂದೂ ವಿದ್ಯಾರ್ಥಿಗಳು ಪ್ರತಿಕ್ರಿಯೆಯ ರೂಪದಲ್ಲಿ ಕೇಸರಿ ಶಾಲನ್ನು ಧರಿಸುತ್ತಿದ್ದರೆ, ಅದರಲ್ಲಿ ತಪ್ಪೇನಿದೆ ?

ಸೌಜನ್ಯ : twitter

ಉಡುಪಿ – ಇಲ್ಲಿಯ ಕುಂದಾಪೂರ ಸರಕಾರಿ ವಿಶ್ವವಿದ್ಯಾಲಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ಹಿಜಾಬ ಧರಿಸಲು ಅನುಮತಿ ನಿರಾಕರಿಸಿದ್ದರಿಂದ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಶ್ವವಿದ್ಯಾಲಯದ ೧೦೦ ಕ್ಕೂ ಅಧಿಕ ಹಿಂದೂ ವಿದ್ಯಾರ್ಥಿನಿಯರು ಕೇಸರಿ ಶಾಲನ್ನು ಹಾಕಿಕೊಂಡು ವಿಶ್ವವಿದ್ಯಾಲಯವನ್ನು ಪ್ರವೇಶಿಸಿದರು.

‘ಒಂದು ವೇಳೆ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ ಧರಿಸಲು ಅನುಮತಿ ಕೋರುತ್ತಿದ್ದರೆ, ನಾವೂ ಕೂಡ ಕೇಸರಿ ಶಾಲನ್ನು ಧರಿಸಿಕೊಂಡು ಏಕೆ ಬರಬಾರದು ? ಎಲ್ಲಿಯವರೆಗೆ ವಿಶ್ವವಿದ್ಯಾಲಯದಲ್ಲಿ ಹಿಜಾಬ ಧರಿಸಲು ನಿಷೇಧಿಸುವುದಿಲ್ಲವೋ, ಅಲ್ಲಿಯವರೆಗೆ ನಾವೂ ಕೇಸರಿ ಶಾಲನ್ನು ಧರಿಸಿಕೊಂಡು ಬರುತ್ತೇವೆ’, ಎಂದು ಈ ವಿದ್ಯಾರ್ಥಿಗಳು ಹೇಳಿದ್ದಾರೆ.

ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಅವರು ಮಾತನಾಡುತ್ತಾ, ಒಂದು ವೇಳೆ ಸಮವಸ್ತ್ರ ನಿರಾಕರಿಸಿ ಹಿಜಾಬ ಧರಿಸುವ ಹಠ ಮಾಡುತ್ತಿದ್ದರೆ, ಇದು ಭಯೋತ್ಪಾದಕ ಮಾನಸಿಕತೆಯಾಗಿದೆ. ಇಂತಹ ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯದಿಂದ ಹೊರದೂಡಬೇಕು ಎಂದು ಹೇಳಿದರು.