ಭಾರತವನ್ನು ವಿಭಜಿಸಿ ಮೊಗಲಿಸ್ತಾನ ಮಾಡುವಂತೆ ಮತಾಂಧರಿಂದ ಒತ್ತಾಯಿಸಲಾಗುತ್ತದೆ ಹಾಗೂ ಅವರಿಂದ ಹಿಂದೂಗಳನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ನೀಡಲಾಗುತ್ತದೆ. ಇದರ ವಿರುದ್ಧ ಅಪರಾಧ ದಾಖಲಿಸಿ ಸಂಬಂಧಿತರ ಮೇಲೆ ಕ್ರಮಕೈಗೊಳ್ಳುವ ಧೈರ್ಯ ಪೊಲೀಸರು ಯಾವಾಗ ತೋರುವರು ? – ಸಂಪಾದಕರು

ಮುಂಬಯಿ – ಅಕಬರ ಮತ್ತು ಟಿಪ್ಪು ಸುಲ್ತಾನ್ ಇವರ ಚಿತ್ರಗಳನ್ನು ಸಂವಿಧಾನದಿಂದ ತೆಗೆಯುವಂತೆ ಒತ್ತಾಯಿಸಿದ ಮಹಾರಾಷ್ಟ್ರ ಕರಣಿ ಸೇನಾ ಮುಖಂಡ ಅಜಯ್ ಸಿಂಹ ಸೇಂಗರ್ ಇವರ ಮೇಲೆ ರಾಷ್ಟ್ರ ಪ್ರತಿಷ್ಠೆಯ ಅವಮಾನವಾಗಿದೆ ಎಂದು 1971 ರ ಕಾಯಿದೆಯ 2 ರ ಪ್ರಕಾರ ಖಾಂದೆಶ್ವರ ಪೊಲೀಸರು ದೂರನ್ನು ದಾಖಲಿಸಿದ್ದಾರೆ.
ದೇಶವು ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಮಹಾರಾಣಾ ಪ್ರತಾಪ ಇವರ ಮಾರ್ಗದಲ್ಲಿ ಹೋಗಬೇಕು, ಅದಕ್ಕಾಗಿ ಈ ಚಿತ್ರಗಳನ್ನು ತೆಗೆಯಬೇಕು ಇಲ್ಲವಾದರೆ ದೇಶದಲ್ಲಿ ಹೊಸ ಸಂವಿಧಾನ ಅಸ್ತಿತ್ವಕ್ಕೆ ತರಬೇಕು, ಎಂದು ಅಜಯ್ಸಿಂಹ ಸೆಂಗರ ಇವರು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಇವರಿಗೆ ಮನವಿಯ ಮೂಲಕ ಒತ್ತಾಯಿಸಿದ್ದಾರೆ. ಅದರ ನಂತರ ಪ್ರಭಾಕರ್ ಕಾಂಬಳೆ ಇವರು ನವಿ ಮುಂಬಯಿಯಲ್ಲಿ ಖಾಂದೇಶ್ವರ ಪೊಲೀಸ್ ಠಾಣೆಯಲ್ಲಿ ಈ ಸಂದರ್ಭದಲ್ಲಿ ದೇಶದ್ರೋಹದ ಅಡಿಯಲ್ಲಿ ಅಪರಾಧವನ್ನು ದಾಖಲಿಸುವಂತೆ ದೂರನ್ನು ನೀಡಿದ್ದರು.
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಕೇರಳಮ್ನ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಮೊದಲ ಮಹಿಳಾ ಶಾಸಕಿ ರೆಸ್ಟೋರೆಂಟ್ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಮಾಡಿದ್ದಕ್ಕೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!