ಮತಾಂತರದ ವಿರುದ್ಧ ಕಾನೂನು ಮಾಡುವುದು ಅತ್ಯಗತ್ಯ ! – ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

* ಹಿಂದೂಗಳಲ್ಲಿ ಹಿಂದುತ್ವದ ಬಗ್ಗೆ ಆಗುತ್ತಿರುವ ಜಾಗೃತಿಯಿಂದಲೇ ಕೇಜ್ರಿವಾಲ್ ಇವರಿಗೆ ಮತಾಂತರ ನಿಷೇಧ ಕಾನೂನಿನ ಮಹತ್ವವನ್ನು ಗಮನಕ್ಕೆ ಬಂದಿದೆ, ಎಂಬುದು ಗಮನದಲ್ಲಿಟ್ಟುಕೊಳ್ಳಿ !- ಸಂಪಾದಕರು

* ಈಗ ಕೇಜ್ರಿವಾಲ್ ಇವರು ಲವ್ ಜಿಹಾದ್, ಸಮಾನ ನಾಗರಿಕ ಕಾನೂನು, ಜನಸಂಖ್ಯೆ ನಿಯಂತ್ರಣ, ಬಾಂಗ್ಲಾದೇಶಿ ಮುಸ್ಲಿಮರ ನುಸುಳುವಿಕೆ ಇತ್ಯಾದಿಗಳ ಬಗ್ಗೆಯೂ ಮಾತನಾಡಬೇಕು ! – ಸಂಪಾದಕರು

ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್

ಜಾಲಂಧರ್ (ಪಂಜಾಬ್) – ಧರ್ಮವು ಎಲ್ಲರ ವೈಯಕ್ತಿಕ ವಿಷಯವಾಗಿದೆ. ಯಾವುದೇ ದೇವತೆಯನ್ನು ಪೂಜಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಭಯ ತೋರಿಸಿ ಯಾರನ್ನಾದರೂ ಮತಾಂತರ ಮಾಡುವುದು ಅಯೋಗ್ಯವಾಗಿದೆ. ಮತಾಂತರದ ವಿರುದ್ಧ ಕಾನೂನು ಮಾಡುವುದು ಅವಶ್ಯಕವಾಗಿದೆ; ಆದರೆ ಇಂತಹ ಕಾನೂನಿನ ಮೂಲಕ ಯಾರನ್ನೂ ಹೆದರಿಸಿ ತೊಂದರೆ ನೀಡಬಾರದು, ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಅವರು ಇಲ್ಲಿ ನಡೆದ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.