
ಬೆಳಗಾವಿ – ಡಿಸೆಂಬರ್ ೨೬ ರಂದು ಪಿರನವಾಡಿ ರಸ್ತೆ, ನಾವಗೆ ಕ್ರಾಸ್ ಗಣೇಶ ಬಾಗ್ ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಮುಖ್ಯ ವಕ್ತಾರರೆಂದು ಭಾಗ್ಯನಗರದ ಭಾಜಪದ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್ ಅವರನ್ನು ಆಹ್ವಾನಿಸಲಾಗಿತ್ತು. ಆಗ ಸಮಾವೇಶದ ಬಳಿಕ ಹಿಂದುತ್ವನಿಷ್ಠ ಶಾಸಕ ಟಿ. ಅವರು ರಾಜಾ ಸಿಂಗ್ ಅವರನ್ನು ಭೇಟಿಯಾಗಿ ಅವರಿಗೆ ‘ಸನಾತನ ಪಂಚಾಂಗ ೨೦೨೨’ಅನ್ನು ಉಡುಗೊರೆ ನೀಡಿದರು. ಈ ವೇಳೆ ಧರ್ಮಪ್ರೇಮಿ ಸೌ. ರೇಖಾ ಪಾಟೀಲ್, ಸನಾತನ ಸಂಸ್ಥೆಯ ಸಾಧಕಿ ಸೌ. ಲಕ್ಷ್ಮೀ ಹಲಗೇಕರ ಮತ್ತು ಹಿಂದುತ್ವನಿಷ್ಠ ಶ್ರೀ. ಪಂಕಜ ಘಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ನಿರೂಪಕರು ಭಾಜಪದ ಶಾಸಕ ಟಿ. ರಾಜಾ ಸಿಂಗ್ ಇವರಿಗೆ ‘ಸನಾತನದ ಸಾಧಕರು ಮತ್ತು ಕೆಲವು ಹಿಂದುತ್ವನಿಷ್ಠರು ನಿಮ್ಮನ್ನು ಭೇಟಿ ಮಾಡಲು ಬಂದಿದ್ದಾರೆ’ ಎಂದು ತಿಳಿಸಿದರು. ಆಗ ಟಿ. ರಾಜಾಸಿಂಗ್ ಅವರನ್ನು ಭೇಟಿಯಾಗಲು ಧರ್ಮಪ್ರೇಮಿಗಳ ಬಹಳ ಜನದಟ್ಟನೆ ಇತ್ತು. ಹೀಗಿದ್ದರೂ ಟಿ. ರಾಜಾಸಿಂಗ್ ಇವರು ಎಲ್ಲರೂ ಪಕ್ಕಕ್ಕೆ ನಿಲ್ಲುವಂತೆ ಕೇಳಿಕೊಂಡು ಸನಾತನದ ಸಾಧಕಿ ಮತ್ತು ಹಿಂದುತ್ವನಿಷ್ಠರನ್ನು ಆದ್ಯತೆಯಿಂದ ಭೇಟಿಯಾದರು. ಅವರು ಭೇಟಿಯಾದಾಗ, ಅವರು ಎಲ್ಲರಿಗೂ ನಮಸ್ಕರಿಸಿದರು ಮತ್ತು ‘ನಿಮ್ಮನ್ನು ಭೇಟಿಯಾದಾಗ ಸಂತೋಷವಾಯಿತು’, ಎಂದು ಹೇಳಿದರು.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!