‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮೊದಲು ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸಲಾಗುವುದು !(ಅಂತೆ)

ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ ಹಿಂದೂವಿರೋಧಿ ಘೋಷಣೆ !

  • ಕಾಂಗ್ರೆಸ್ ಇನ್ನೆಷ್ಟು ವರ್ಷ ಮುಸಲ್ಮಾನರ ಮತ್ತು ಕ್ರೈಸ್ತರ ಓಲೈಕೆ ಮಾಡಲು ಹಿಂದೂದ್ರೋಹ ಬಗೆದು ತನ್ನ ರಾಜಕೀಯ ಸಮಾಧಿಯನ್ನು ಕಟ್ಟಲಿದೆ ? ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆದಿದ್ದಾರೆ. ಆದರೂ ಕಾಂಗ್ರೆಸ್ ಅದರಿಂದ ಏನನ್ನೂ ಕಲಿತಿಲ್ಲ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !
  • ಹಿಂದೂಗಳನ್ನು ಇತರ ಧರ್ಮದವರು ಮತಾಂತರಿಸಬೇಕು, ಮತಾಂಧರು ಹಿಂದೂಗಳ ಹೆಣ್ಣು ಮಕ್ಕಳನ್ನು ಪ್ರೀತಿಯ ಬಲೆಯಲ್ಲಿ ಎಳೆದು ಮತಾಂತರಿಸಬೇಕು, ಎಂದು ಕಾಂಗ್ರೆಸ್‌ನವರಿಗೆ ಅನಿಸುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
  • ಕಾಂಗ್ರೆಸ್‌ನವರು ಮೊಘಲ್ ದಾಳಿಕೋರರು, ನಿಜಾಮ ಮತ್ತು ಟಿಪ್ಪು ಸುಲ್ತಾನರ ವಂಶಸ್ಥರು, ಎಂಬುದನ್ನು ನೆನಪಿಡಿ !

ಬೆಂಗಳೂರು – ೨೦೨೩ ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ವಿಧಾನಸಭೆಯ ಮೊದಲ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂಬ ಹಿಂದೂದ್ರೋಹಿ ಹೇಳಿಕೆಯನ್ನು ಕಾಂಗ್ರೆಸ್‌ನ ನಾಯಕ, ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ವಿಪಕ್ಷದ ನಾಯಕ ಸಿದ್ಧರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡುತ್ತಿರುವಾಗ ಹೇಳಿದರು. ಈಗಿನ ಭಾಜಪ ಸರಕಾರವು ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಅಂಗೀಕರಿಸಿದ್ದು, ಇದೀಗ ವಿಧಾನ ಪರಿಷತ್ತಿನಲ್ಲಿ ಅನುಮೋದನೆಗಾಗಿ ಮಂಡಿಸಲಾಗಿದೆ.

ಸಿದ್ಧರಾಮಯ್ಯ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ನಾನು ಕೂಡ ಬಲವಂತದ ಮತಾಂತರವನ್ನು ವಿರೋಧಿಸಿದ್ದೇನೆ. ಬಲವಂತದ ಮತಾಂತರದ ವಿರುದ್ಧ ಸಂವಿಧಾನದಲ್ಲಿ ಅವಕಾಶವಿದೆ; ಹಾಗಾದರೆ ಹೊಸ ಕಾನೂನನ್ನು ಜಾರಿಗೊಳಿಸುವ ಅಗತ್ಯ ಏನಿತ್ತು ? ಪ್ರಜ್ಞಾವಂತರೆಲ್ಲರೂ ಈ ಕಾನೂನನ್ನು ವಿರೋಧಿಸಬೇಕು. ಮತ್ತೊಂದೆಡೆ ಬೌದ್ಧ, ಜೈನ, ಲಿಂಗಾಯತ ಮತ್ತು ಸಿಕ್ಖ್ ಧರ್ಮಗಳು ಹಿಂದೂ ಧರ್ಮದ ಭಾಗವಾಗಿದೆ ಎಂದು ಹಬ್ಬಿಸಲಾಗುತ್ತಿದೆ. ಇದೊಂದು ಅಪಾಯಕಾರಿ ಪ್ರಯತ್ನ; ಏಕೆಂದರೆ ಈ ಧರ್ಮಗಳು ವೈದಿಕ ಧರ್ಮಕ್ಕೆ ವಿರುದ್ಧವಾಗಿ ಸ್ಥಾಪಿಸಲ್ಪಟ್ಟವು. ಇದನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ, ಎಂದಿದ್ದಾರೆ. (ಈ ಪಂಥಗಳು ಹಿಂದೂ ಧರ್ಮದಿಂದ ಹುಟ್ಟಿಕೊಂಡಿರುವುದರಿಂದ, ಅವು ಹಿಂದೂ ಧರ್ಮದ ಒಂದು ಭಾಗವೆಂದು ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲದೇ ೧ ಸಾವಿರದ ೪೦೦ ವರ್ಷಗಳ ಹಿಂದೆ ಇಸ್ಲಾಂ ಧರ್ಮವು ಭೂಮಿಯ ಮೇಲೆ ಅಸ್ತಿತ್ವದಲ್ಲಿಲ್ಲದಿದ್ದಾಗ ಜನರು ಮೂರ್ತಿಯನ್ನು ಪೂಜಿಸುತ್ತಿದ್ದರು, ಇದು ಇತಿಹಾಸವಿದೆ ಮತ್ತು ೨ ಸಾವಿರ ವರ್ಷಗಳ ಹಿಂದೆ ಯೇಸುವಿನ ಜನ್ಮವಾಗಿ ಕ್ರೈಸ್ತ ಧರ್ಮ ಸ್ಥಾಪನೆಯಾಗುವ ಮೊದಲು ಹಿಂದೂ ಧರ್ಮವನ್ನು ಪಾಲಿಸಲಾಗುತ್ತಿತ್ತು, ಎಂದು ಅನೇಕ ಸಂಶೋಧನೆಗಳು ಬಹಿರಂಗಪಡಿಸಿದ್ದರಿಂದ ಬೌದ್ಧರು, ಜೈನರು ಮತ್ತು ಸಿಕ್ಖ್‌ರನ್ನು ಹಿಂದೂ ಧರ್ಮದ ಭಾಗವೆಂದು ಕರೆಯುವುದು ಸೂಕ್ತವಾಗಿದೆ. ಅಲ್ಲದೆ, ಲಿಂಗಾಯತವು ಹಿಂದೂ ಧರ್ಮದ ಇಂದು ಸಮುದಾಯವಾಗಿದೆ, ಅದನ್ನು ಹಿಂದೂಗಳಿಂದ ಬೇರೆ ಎಂದು ತೋರಿಸುವ ಅಪಾಯಕಾರಿ ಪ್ರಯತ್ನವು ಹಿಂದೂದ್ರೋಹಿಗಳಿಂದ ಮಾಡಲಾಗುತ್ತಿದೆ. ಇದನ್ನು ಹಿಂದೂಗಳು ಕಾನೂನಿನ ಮೂಲಕ ವಿರೋಧಿಸುವುದು ಆವಶ್ಯಕವಾಗಿದೆ ! – ಸಂಪಾದಕರು)