ದೆಹಲಿಯಲ್ಲಿ ಮತಾಂಧರ ಗುಂಪಿನಿಂದಾದ ಹೊಡೆತದಲ್ಲಿ ಓರ್ವ ಹಿಂದೂ ತರುಣನ ಮೃತ್ಯು

* ಹಿಂದೂಗಳಿಂದ ಕಥಿತ ರೂಪದಲ್ಲಿ ಯಾವುದೇ ಮತಾಂಧನನ್ನು ಹೊಡೆದು, ಅದರಲ್ಲಿ ಆತನ ಮೃತ್ಯುವಾದರೆ ಆಕಾಶಪಾತಾಳ ಒಂದು ಮಾಡಿ ‘ಭಾರತದಲ್ಲಿನ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’ಎಂದು ಬೊಬ್ಬೆ ಹಾಕುವ ಜನರು ಈಗ ಏಕೆ ಸುಮ್ಮನಿದ್ದಾರೆ ? ಅವರ ಲೆಕ್ಕದಲ್ಲಿ ಹಿಂದೂಗಳ ಪ್ರಾಣಕ್ಕೆ ಬೆಲೆ ಇಲ್ಲವೇ ?- ಸಂಪಾದಕರು 

* ರಾಜಧಾನಿ ದೆಹಲಿಯಲ್ಲಿಯೇ ಹಿಂದೂಗಳ ಸ್ಥಿತಿಯು ಹೀಗಿದ್ದಲ್ಲಿ, ಇತರ ಕಡೆಗಳಲ್ಲಿ ಹಿಂದೂಗಳ ಸ್ಥಿತಿಯು ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ !- ಸಂಪಾದಕರು 

ನವದೆಹಲಿ – ಇಲ್ಲಿನ ಸಂಗಮ ವಿಹಾರದಲ್ಲಿ ಜತಿನ ಮತ್ತು ಪಂಕಜ ಎಂಬ ಹಿಂದೂ ತರುಣರ ಮೇಲೆ 7-8 ಮತಾಂಧರ ಗುಂಪು ಹಲ್ಲೆ ನಡೆಸಿ, ಜತಿನ ಎಂಬುವನ ಮೃತ್ಯುವಾದ ಘಟನೆಯು ಡಿಸೆಂಬರ್ 20 ರ ರಾತ್ರಿ ನಡೆದಿದೆ. ಈ ಘಟನೆಯ ಸಿಸಿಟಿವಿ ಚಿತ್ರೀಕರಣವು ಬಹಿರಂಗವಾದಾಗ ಪೊಲೀಸರು ರಮಜಾನ ಎಂಬ ಹೆಸರಿನ ತರುಣನೊಂದಿಗೆ ಇನ್ನೂ ಒಬ್ಬನನ್ನು ಬಂಧಿಸಿದ್ದು ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಘಟನೆಯು ಕಳ್ಳತನದ ಉದ್ದೇಶದಿಂದಾಗಿದೆ. ರಾತ್ರಿ ಜತಿನ ಮತ್ತು ಪಂಕಜ ಇಬ್ಬರೂ ಮನೆಗೆ ಹಿಂದಿರುಗುತ್ತಿರುವಾಗ ಈ ಘಟನೆ ನಡೆದಿದೆ. ಈ ಗುಂಪು ಅವರಿಂದ 3000 ರೂಪಾಯಿಯನ್ನು ದೋಚಿ, ಅವರಿಗೆ ಪ್ರಜ್ಞೆ ತಪ್ಪುವವರೆಗೆ ಹೊಡೆದು ನಾಲೆಯಲ್ಲಿ ಎಸೆದು ಬಿಟ್ಟಿದೆ. ಇದರಲ್ಲಿ ಜತಿನನ ಮೃತ್ಯುವಾಯಿತು.