|

ಲುಧಿಯಾನಾ (ಪಂಜಾಬ) – ಇಲ್ಲಿಯ ನ್ಯಾಯಾಲಯದ ಆವರಣದಲ್ಲಿ ನಡೆದಿರುವ ಸ್ಫೋಟದಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ ಹಾಗೂ ಅನೇಕರು ಗಾಯಗೊಂಡಿದ್ದಾರೆ. ಈ ಸ್ಫೋಟ ನ್ಯಾಯಾಲಯದ ಎರಡನೇ ಮಹಡಿಯಲ್ಲಿ ೯ ಸಂಖ್ಯೆಯ ನ್ಯಾಯಾಲಯದಲ್ಲಿ ಆಗಿದೆ ಎಂದು ಹೇಳಲಾಗುತ್ತಿದೆ. ಈ ಸ್ಫೋಟದಿಂದ ಅಲ್ಲಿಯ ಗೋಡೆ ಕುಸಿದು ಅದರ ಕೆಳಗಡೆ ಕೆಲವರು ಸಿಲುಕಿದ್ದಾರೆ, ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದಿದೆ. ಈ ಸ್ಫೋಟದಿಂದ ಆವರಣದಲ್ಲಿನ ವಾಹನಗಳಿಗೆ ಹಾನಿಯಾಗಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈ ಸ್ಫೋಟ ಬಾಂಬನಿಂದ ಆಗಿದೆ ಎಂದು ಹೇಳಲಾಗುತ್ತಿದೆ. ಆದರೂ ಇದು ವರೆಗೂ ಅಧಿಕೃತವಾಗಿ ಏನನ್ನೂ ಹೇಳಲಾಗಲಿಲ್ಲ. ಸ್ಫೋಟದ ನಂತರ ನ್ಯಾಯಾಲಯದ ಆವರಣದಲ್ಲಿ ನೂಕುನುಗ್ಗಲು ಉಂಟಾಗಿದೆ.
Explosion at Ludhiana District Court Complex | Punjab CM Charanjit Singh Channi meets injured persons at the hospital pic.twitter.com/y3aXlo99Oz
— ANI (@ANI) December 23, 2021
ಒಬ್ಬ ಪ್ರತ್ಯಕ್ಷದರ್ಶಿಯ ಹೇಳಿಕೆಯ ಪ್ರಕಾರ ಈ ಸ್ಫೋಟ ನ್ಯಾಯಾಲಯದ ಶೌಚಾಲಯದಲ್ಲಿ ನಡೆದಿದೆ. ಯಾರಾದರು ಬಂದು ಈ ಸ್ಫೋಟ ಮಾಡಿರುವುದು ಎಂದು ಪ್ರತ್ಯಕ್ಷದರ್ಶಿಗಳ ದಾವೆ ಮಾಡುತ್ತಿದ್ದಾರೆ. ಇದೇ ತಿಂಗಳಲ್ಲಿ ರಾಜ್ಯದ ಪಾಕಿಸ್ತಾನ ಗಡಿಗೆ ಅಂಟಿಕೊಂಡಿರುವ ಗುರುದಾಸಪುರ ಜಿಲ್ಲೆಯಲ್ಲಿನ ಸಲೇಮಪೂರ ಅರೈಯನ ಊರಿನಿಂದ ೪ ನಾಡ್ಬಾಂಬ್ ಮತ್ತು ಟಿಫಿನ್ ಬಾಂಬ್ (ತಿಂಡಿಯ ಡಬ್ಬಿಯಲ್ಲಿ ಇಟ್ಟಿರುವ ಬಾಂಬ್) ಸಿಕ್ಕಿತ್ತು. ಇದರ ೨ ದಿನಗಳ ಮೊದಲು ಪೊಲೀಸರಿಗೆ ರಾಜ್ಯದಲ್ಲಿನ ದಿನಾನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಡಿಎಕ್ಸ್ ಸ್ಫೋಟಕ ವಶಪಡಿಸಿಕೊಳ್ಳಲಾಗಿತ್ತು.
ಬಾಂಬ್ ಜೋಡಿಸುವಾಗ ಸ್ಪೋಟ ನಡೆದಿರುವ ಸಾಧ್ಯತೆಯ
ತನಿಖಾ ದಳದ ಮೂಲಗಳು ನೀಡಿರುವ ಮಾಹಿತಿಗನುಸಾರ ಬಾಂಬ್ ಇಡಲು ಆತ ಶೌಚಾಲಯದಲ್ಲಿ ಜೋಡಣೆ ಮಾಡುತ್ತಿರುವಾಗ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದರಲ್ಲಿ ಬಾಂಬ್ ಜೋಡಿಸುವ ವ್ಯಕ್ತಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.