ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಹಿಂದೂ ಎಂದು ಹೇಳಿ ಪ್ರವೇಶ ಪಡೆಯಲು ಪ್ರಯತ್ನಿಸುತತಿದ್ದ ಮುಸಲ್ಮಾನ ಯುವಕನ ಹಾಗೂ ಅವನ ಹಿಂದೂ ಸ್ನೇಹಿತೆಯ ಬಂಧನ

ಸುಳ್ಳು ಹೇಳಿ ಹಿಂದೂ ದೇವಸ್ಥಾನವನ್ನು ಪ್ರವೇಶಿಸುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ! ಸಂಪಾದಕರು

ಉಜ್ಜೈನ (ಮಧ್ಯಪ್ರದೇಶ) – ದೇಶದಲ್ಲಿನ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಇಲ್ಲಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಭಸ್ಮಾರತಿಯ ಸಮಯದಲ್ಲಿ ಹಿಂದೂ ಯುವತಿಯ ಜೊತೆ ಒಬ್ಬ ಮುಸಲ್ಮಾನ ಯುವಕ ತಾನು ಹಿಂದೂ ಎಂದು ಸುಳ್ಳು ಆಧಾರ ಕಾರ್ಡ ತೋರಿಸಿ ಪ್ರವೇಶ ಪಡೆಯುವ ಪ್ರಯತ್ನ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಮುಸಲ್ಮಾನ ಯುವಕನ ಹೆಸರು ಯುಸೂಫ್ ಎಂದಿದ್ದು, ಆತ ಕರ್ನಾಟಕದವನು. ಅವನ ಹತ್ತಿರ ‘ಅಭಿಷೇಕ ದುಬೆ’ ಹೆಸರಿನ ನಕಲಿ ಆಧಾರ ಕಾರ್ಡ ಸಿಕ್ಕಿದೆ. ಹಿಂದೂ ಯುವತಿಯ ಹೆಸರು ಖುಷಬು ಎಂದಾಗಿದ್ದು, ಆಕೆ ಮುಂಬಯಿ ನಿವಾಸಿಯಾಗಿದ್ದಾಳೆ.