ಸಾಗರ (ಮಧ್ಯಪ್ರದೇಶ) ಇಲ್ಲಿಯ `ಸೆಂಟ್ ಫ್ರಾನ್ಸಿಸ್ ಸೇವಾಧಾಮ ಆಶ್ರಮ’ದಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಬಲವಂತವಾಗಿ ಗೋಮಾಂಸ ತಿನ್ನಲು ಹಾಗೂ ಬೈಬಲ್ ಓದಲು ಒತ್ತಾಯ !

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ಆದೇಶ

ಕ್ರೈಸ್ತರ ಶಾಲೆ, ಮಹಾವಿದ್ಯಾಲಯಗಳು, ಅನಾಥಾಶ್ರಮಗಳು ಮತ್ತು ಈಗ ಆಶ್ರಮಗಳಲ್ಲಿ ಈ ರೀತಿ ನಡೆಯುತ್ತಿರುತ್ತದೆ; ಆದರೆ ಪೊಲೀಸರು ಮತ್ತು ಆಡಳಿತ ಇದರ ಕಡೆಗೆ ಯಾವಾಗಲೂ ನಿರ್ಲಕ್ಷಿಸುತ್ತದೆ. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !- ಸಂಪಾದಕರು 

ಸಾಗರ (ಮಧ್ಯಪ್ರದೇಶ) – ಇಲ್ಲಿಯ ಶ್ಯಾಮಪುರಾ ಪ್ರದೇಶದ `ಸೇಂಟ್ ಫ್ರಾನ್ಸಿಸ್ ಸೇವಾಧಾಮ ಆಶ್ರಮ’ದಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಬಲವಂತವಾಗಿ ಗೋಮಾಂಸವನ್ನು ತಿನ್ನಲು ನೀಡಿದೆ ಹಾಗೂ ಬೈಬಲ್ ಓದಲು ಒತ್ತಾಯಿಸಿದೆ ಮತ್ತು ಹೀಗೆ ಮಾಡದಿದ್ದರಿಂದ ಮಕ್ಕಳ ಮೇಲೆ ದೌರ್ಜನ್ಯ ಎಸೆಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ವು ಸಾಗರ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ನೋಟಿಸ್ ನೀಡಿ ಎರಡು ದಿನಗಳಲ್ಲಿ ಉತ್ತರಿಸಲು ಮತ್ತು ಕ್ರಮಕೈಗೊಳ್ಳಲು ಹೇಳಿದೆ. ಕ್ರೈಸ್ತರ ಆಶ್ರಮದಲ್ಲಿ ಕಳೆದ ಒಂದೂವರೆ ವರ್ಷದಿಂದ ಒಬ್ಬ ಸಹೋದರ ಮತ್ತು ಸಹೋದರಿ ವಾಸವಾಗಿದ್ದರು. ಇವರ ಸಂದರ್ಭದಲ್ಲಿ ಈ ಘಟನೆ ನಡೆದಿರುವುದರಿಂದ ಅವರು ಅವರ ಪೋಷಕರ ಮೂಲಕ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.