ಅಸ್ಸಾಂನಲ್ಲಿ ಭಾಜಪದ ಸರಕಾರದ ಮುಖ್ಯಮಂತ್ರಿ ಹೀಗೆ ಮಾಡಬಹುದಾದರೆ ದೇಶದ ಬೇರೆ ಭಾಜಪದ ಆಡಳಿತದ ರಾಜ್ಯಗಳಲ್ಲಿಯೂ ಹೀಗೆ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ.- ಸಂಪಾದಕರು

ಗುಹಾಟಿ (ಅಸ್ಸಾಂ) – ರಾಜ್ಯದಲ್ಲಿ ಮದರಸಾಗಳನ್ನು ಮುಚ್ಚುವುದು ನಮ್ಮ ಉದ್ದೇಶವಾಗಿದೆ. ನಾವು ಇಲ್ಲಿಯವರೆಗೆ ಅಂದಾಜು 700 ಮದರಸಾಗಳನ್ನು ಮುಚ್ಚಿದ್ದೇವೆ. ಉಳಿದಿರುವ ಮದರಸಾಗಳು ನರ್ಸಿಂಗ್ ಸ್ಕೂಲ್, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಮಹಾವಿದ್ಯಾಲಯವಾಗಿ ರೂಪಾಂತರಿಸುವ ವಿಚಾರವಿದೆ. ನನಗೆ ಅನಿಸುತ್ತಿದೆ, ಮುಸಲ್ಮಾನರು ಮದರಸಾಗೆ ಹೋಗದೆ ಆಧುನಿಕ ವೈದ್ಯರು ಮತ್ತು ಇಂಜಿನಿಯರು ಆಗಬೇಕು ಮತ್ತು ಸಮಾಜಕ್ಕೆ ಸಹಾಯ ಮಾಡಬೇಕು. ನಾನು ಮುಸಲ್ಮಾನ ಸಮಾಜದ ಹಿತಕ್ಕಾಗಿಯೇ ಮದರಸಾಗಳನ್ನು ಮುಚ್ಚಿದ್ದೇನೆ’, ಎಂದು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು ಒಂದು ವಾರ್ತಾವಾಹಿನಿಯ ಕಾರ್ಯಕ್ರಮದಲ್ಲಿ ಹೇಳಿದರು.
ಸರಮಾರವರು ಮುಂದೆ ಮಾತನಾಡುತ್ತಾ, ನಾನು ಮುಸಲ್ಮಾನರಿಗೆ, `ನೀವು ನನಗೆ ವೋಟು ಕೊಡಿ’, ಎಂದು ಹೇಳಿದರೆ ಅವರು ನನಗೆ ವೋಟು ಕೊಡುವರೇ ? ನನಗೆ ಖಂಡಿತ ಗೊತ್ತು ಅವರು ನನಗೆ ವೋಟು ಕೊಡುವುದಿಲ್ಲ, ಹಾಗಾದರೆ ನಾನು ಅವರಿಗೆ ವೋಟು ಏಕೆ ಕೇಳಲಿ ? ಯಾವಾಗ ಮುಸಲ್ಮಾನರ ಮಕ್ಕಳು ದೊಡ್ಡವರಾಗಿ ಡಾಕ್ಟರ್ ಅಥವಾ ಇಂಜಿನಿಯರ್ ಆಗುವರೋ ಆಗ ಅವರು ನನಗೆ ಖಂಡಿತವಾಗಿಯೂ ವೋಟು ಕೊಡುವರು. ಆದರೆ ಇಂದು ಆ ರೀತಿಯ ಪರಿಸ್ಥಿತಿ ಇಲ್ಲ’, ಎಂದರು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !