ಅಸ್ಸಾಂನಲ್ಲಿ ಭಾಜಪದ ಸರಕಾರದ ಮುಖ್ಯಮಂತ್ರಿ ಹೀಗೆ ಮಾಡಬಹುದಾದರೆ ದೇಶದ ಬೇರೆ ಭಾಜಪದ ಆಡಳಿತದ ರಾಜ್ಯಗಳಲ್ಲಿಯೂ ಹೀಗೆ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ.- ಸಂಪಾದಕರು

ಗುಹಾಟಿ (ಅಸ್ಸಾಂ) – ರಾಜ್ಯದಲ್ಲಿ ಮದರಸಾಗಳನ್ನು ಮುಚ್ಚುವುದು ನಮ್ಮ ಉದ್ದೇಶವಾಗಿದೆ. ನಾವು ಇಲ್ಲಿಯವರೆಗೆ ಅಂದಾಜು 700 ಮದರಸಾಗಳನ್ನು ಮುಚ್ಚಿದ್ದೇವೆ. ಉಳಿದಿರುವ ಮದರಸಾಗಳು ನರ್ಸಿಂಗ್ ಸ್ಕೂಲ್, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಮಹಾವಿದ್ಯಾಲಯವಾಗಿ ರೂಪಾಂತರಿಸುವ ವಿಚಾರವಿದೆ. ನನಗೆ ಅನಿಸುತ್ತಿದೆ, ಮುಸಲ್ಮಾನರು ಮದರಸಾಗೆ ಹೋಗದೆ ಆಧುನಿಕ ವೈದ್ಯರು ಮತ್ತು ಇಂಜಿನಿಯರು ಆಗಬೇಕು ಮತ್ತು ಸಮಾಜಕ್ಕೆ ಸಹಾಯ ಮಾಡಬೇಕು. ನಾನು ಮುಸಲ್ಮಾನ ಸಮಾಜದ ಹಿತಕ್ಕಾಗಿಯೇ ಮದರಸಾಗಳನ್ನು ಮುಚ್ಚಿದ್ದೇನೆ’, ಎಂದು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು ಒಂದು ವಾರ್ತಾವಾಹಿನಿಯ ಕಾರ್ಯಕ್ರಮದಲ್ಲಿ ಹೇಳಿದರು.
ಸರಮಾರವರು ಮುಂದೆ ಮಾತನಾಡುತ್ತಾ, ನಾನು ಮುಸಲ್ಮಾನರಿಗೆ, `ನೀವು ನನಗೆ ವೋಟು ಕೊಡಿ’, ಎಂದು ಹೇಳಿದರೆ ಅವರು ನನಗೆ ವೋಟು ಕೊಡುವರೇ ? ನನಗೆ ಖಂಡಿತ ಗೊತ್ತು ಅವರು ನನಗೆ ವೋಟು ಕೊಡುವುದಿಲ್ಲ, ಹಾಗಾದರೆ ನಾನು ಅವರಿಗೆ ವೋಟು ಏಕೆ ಕೇಳಲಿ ? ಯಾವಾಗ ಮುಸಲ್ಮಾನರ ಮಕ್ಕಳು ದೊಡ್ಡವರಾಗಿ ಡಾಕ್ಟರ್ ಅಥವಾ ಇಂಜಿನಿಯರ್ ಆಗುವರೋ ಆಗ ಅವರು ನನಗೆ ಖಂಡಿತವಾಗಿಯೂ ವೋಟು ಕೊಡುವರು. ಆದರೆ ಇಂದು ಆ ರೀತಿಯ ಪರಿಸ್ಥಿತಿ ಇಲ್ಲ’, ಎಂದರು.
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage