‘ಅಮೆಜಾನ್’ನಿಂದ ಗಾಂಜಾ ಮತ್ತು ಬಾಂಬ್ ನಿರ್ಮಿತಿಯ ವಸ್ತುಗಳ ಮಾರಾಟ ಪ್ರಕರಣದೇಶದಲ್ಲಿ 500 ಕ್ಕಿಂತಲೂ ಹೆಚ್ಚಿನ ಜಿಲ್ಲೆಗಳಲ್ಲಿ 1 ಸಾವಿರದ 200 ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ಆಂದೋಲನ |
ಇದನ್ನೇಕೆ ಆಗ್ರಹಿಸಬೇಕಾಗುತ್ತದೆ ? ಪೊಲೀಸರು ಅಥವಾ ಆಡಳಿತದಿಂದ ಏಕೆ ಕ್ರಮ ಕೈಗೊಳ್ಳುವುದಿಲ್ಲ ಅಥವಾ ಗಾಂಜಾ ಮತ್ತು ಬಾಂಬ್ ತಯಾರಿಸುವ ವಸ್ತುಗಳು ಮಾರಾಟ ಮಾಡಲು ಅವರಿಗೆ ಅನುಮತಿ ಇದೆಯೇ ?- ಸಂಪಾದಕರು
`ಕ್ಯಾಟ್’ ಅಂದರೆ ಅಖಿಲ ಭಾರತೀಯ ವ್ಯಾಪಾರಿ ಮಹಾಸಂಘ (`ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್’)

ನವ ದೆಹಲಿ – ಅಮೇರಿಕಾದಲ್ಲಿನ ದೈತ್ಯ ಕಂಪನಿಯಾದ `ಅಮೆಜಾನ್’ನಿಂದ ಗಾಂಜಾ ಮತ್ತು ಬಾಂಬ್ ತಯಾರಿಸುವ ಸಾಧನಸಾಮಗ್ರಿಗಳು, ದೇಶದಲ್ಲಿ ನಿಷೇಧ ಹೇರಿರುವ ಕೆಲವು ರಾಸಾಯನಿಕಗಳು ಗ್ರಾಹಕರಿಗೆ ಸಹಜವಾಗಿ ಲಭ್ಯವಾಗುತ್ತಿರುವುದು ಬೆಳಕಿಗೆ ಬಂದಿರುವುದರಿಂದ ಈ ಕಂಪನಿಯ ಮೇಲೆ ನಿಷೇಧ ಹೇರುವ ಬೇಡಿಕೆ ಮಾಡಲಾಗುತ್ತಿದೆ. ಇದರಲ್ಲಿ ಈಗ ದೇಶದ `ಕಾನ್ಫೆಡರೇಶನ್ ಅಫ್ ಆಲ್ ಇಂಡಿಯ ಟ್ರೇಡರ್ಸ್’ (ಕ್ಯಾಟ್)ನವರು ಈ ಕಂಪನಿಯ ವಿರುದ್ಧ ನವೆಂಬರ್ 24 ರಂದು ದೇಶದ ಬೇರೆ ಬೇರೆ ರಾಜ್ಯದಲ್ಲಿ 500 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 1 ಸಾವಿರದ 200 ಕ್ಕೂ ಹೆಚ್ಚು ಸ್ಥಳಗಳಲ್ಲಿ ಆಂದೋಲನಗಳನ್ನು ನಡೆಸಿದ್ದಾರೆ. `ಅಮೆಜಾನ್’ನವರು ದೇಶದ ಕಾನೂನು ಮತ್ತು ನಿಯಮಗಳಿಗನುಸಾರ ವ್ಯವಹಾರ ಮಾಡಬೇಕು ಇಲ್ಲದಿದ್ದರೆ ಭಾರತದಿಂದ ಹೊರಟು ಹೋಗಬೇಕು’, ಎಂದು ಎಚ್ಚರಿಕೆ `ಕ್ಯಾಟ್’ ನೀಡಿದೆ. `ದೇಶದಲ್ಲಿ ಸಾಮಾನ್ಯರಿಗಾಗಿ ಮತ್ತು ದೊಡ್ಡ ಕಂಪನಿಗಳಿಗಾಗಿ ಬೇರೆಬೇರೆ ಕಾನೂನು ಇದೆಯೇ ?’ ಎಂದು ಈ ಸಂಘಟನೆಯು ಪ್ರಶ್ನಿಸಿದೆ. `ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ದೇಶದಲ್ಲಿನ ವ್ಯಾಪಾರಿಗಳು `ಭಾರತ ವ್ಯಾಪಾರ ಬಂದ ಮಾಡುವರು’ ಎಂದೂ ಎಚ್ಚರಿಕೆ ನೀಡಿದೆ.
CAIT demands action against Amazon for ‘marijuana sale’ https://t.co/ETTtxce1iS @deccanherald @praveendel @BCBHARTIA @sumitagarwal_IN @narendramodi @PMOIndia @rajnathsingh @AmitShah @PiyushGoyal @nsitharaman @HardeepSPuri @smritiirani @ChouhanShivraj @drnarottammisra @CimGOI
— Confederation of All India Traders (CAIT) (@CAITIndia) November 23, 2021
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು