ಯಾವುದು ಸಮಾಜದ ಮತ್ತು ಪ್ರತಿಯೊಬ್ಬ ನಾಗರಿಕನ ಒಳಿತಿಗಿಲ್ಲ, ಆ ಪ್ರತಿಯೊಂದು ಅಂಶವನ್ನು ಮುಚ್ಚುವುದು ಅವಶ್ಯಕವಾಗಿದೆ. ಮದ್ಯ, ತಂಬಾಕು ಮತ್ತು ಗುಟ್ಖಾ ಸೇವನೆಯನ್ನು ನಿಷೇಧಿಸುವುದು ಸಹ ಅಗತ್ಯವಾಗಿದೆ.- ಸಂಪಾದಕರು

ನವ ದೆಹಲಿ : ಅಮಲು ಪದಾರ್ಥಗಳು ಪ್ರತಿಯೊಬ್ಬರ ಜೀವನದ ಭಾಗವಾಗಿದೆ ಮತ್ತು ಹಲವಾರು ಪ್ರಸಂಗಗಳಲ್ಲಿ ಅಮಲು ಪದಾರ್ಥಗಳು ಜೀವನದ ನೋವನ್ನು ಕಡಿಮೆ ಮಾಡುತ್ತದೆ. ಮದ್ಯಪಾನ, ತಂಬಾಕು, ಗುಟ್ಖಾ ಇತ್ಯಾದಿಗಳಿಂದಲೂ ಹಾನಿಯಾಗುತ್ತವೆ; ಆದರೂ ಈ ಅಮಲು ಪದಾರ್ಥಗಳು ತೆರಿಗೆ ಪಾವತಿಸುವ ಮೂಲಕ ಸೇವಿಸಲು ಅನುಮತಿಸಲಾಗಿದೆ; ಹಾಗಾದರೆ ಇತರ ಅಮಲು ಪದಾರ್ಥಗಳನ್ನು ಏಕೆ ಅನುಮತಿಸಲಾಗುವುದಿಲ್ಲ ? ಅನೇಕ ಸಂದರ್ಭಗಳಲ್ಲಿ, ಔಷಧಿಗಳ ಮೂಲಕ ಅಮಲು ಪದಾರ್ಥಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಿರುವಾಗ ಅಗತ್ಯ ಬಿದ್ದರೆ ಅಮಲು ಪದಾರ್ಥ ಸೇವನೆಗೆ ಏಕೆ ಒಪ್ಪಿಗೆ ನೀಡಬಾರದು ?, ಎಂದು ಕಾಂಗ್ರೆಸ್ ರಾಜ್ಯಸಭಾ ಸಂಸದ ಕೆ.ಟಿ.ಎಸ್. ತುಳಸಿ ಕೇಳಿದ್ದಾರೆ.
‘Allow drugs to be used with taxes’: Congress Rajya Sabha MP & Sr SC Advocate KTS Tulsi https://t.co/1GPjS4h8xz
— Republic (@republic) October 27, 2021
ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ನನ್ನು ಅಮಲು ಪದಾರ್ಥ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ತುಳಸಿ ಇವರು ಮಾತನಾಡುತ್ತಿದ್ದರು.
ತುಳಸಿ ಅವರು ಮಾತನಾಡುತ್ತಾ, ‘ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್, 1985′ (ಮಾದಕ ವಸ್ತು ಮತ್ತು ಮನಸ್ಸಿನ ಮೇಲೆ ಮಾಡುವ ಪರಿಣಾಮ ವಸ್ತು, 1985) ಕಾನೂನಿನಲ್ಲಿ ತಿದ್ದುಪಡಿ ಮಾಡುವುದು ಅಗತ್ಯವಿದೆ; ಏಕೆಂದರೆ ಅದು ಜನರಿಗೆ ತೊಂದರೆ ನೀಡಲು ಬಳಸಲಾಗುತ್ತದೆ ಎಂದು ಹೇಳಿದರು.
ಅಮಲು ಪದಾರ್ಥ ವಿರೋಧಿ ಕಾಯ್ದೆ ಏನಿದೆ ?
‘ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್, 1985′ ಈ ಕಾನೂನಿಗನುಸಾರ ಯಾವುದೇ ವ್ಯಕ್ತಿಯು ಅಮಲು ಪದಾರ್ಥಗಳನ್ನು ಉತ್ಪಾದಿಸುವುದು ಅಥವಾ ಬೆಳೆಸುವುದು, ಖರೀದಿಸುವುದು, ಮಾರಾಟ ಮಾಡುವುದು, ತಮ್ಮೊಂದಿಗೆ ಇಟ್ಟುಕೊಳ್ಳುವುದು, ಸಾಗಿಸುವುದು, ಸೇವಿಸುವುದು ಇತ್ಯಾದಿ ಕೃತಿಗಳ ಮೇಲೆ ನಿಷೇಧ ಹೇರಲಾಗಿದೆ. ಇಂತಹ ಕೃತ್ಯಗಳನ್ನು ಎಸಗುವವರು ಸಿಕ್ಕಿಬಿದ್ದಲ್ಲಿ ಈ ಕಾನೂನಿನಡಿಯಲ್ಲಿ ಅವರ ಮೇಲೆ ಕಠಿಣ ಶಿಕ್ಷೆ ನೀಡುವ ವ್ಯವಸ್ಥೆ ಇದೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath